ಪರಿಚಿತನಿಂದಲೇ ಹತ್ಯೆಗೀಡಾದ ಬಂಟ್ವಾಳ ತಾಲೂಕಿನ ಬೋಳಂತುರು ಗ್ರಾಮದ ಸುರಿಬೈಲು ನಿವಾಸಿಯಾದ ಅಬ್ದುಲ್ ಸಮದ್ ಮನೆಗೆ ರಾಜ್ಯ ವಿಪಕ್ಷ ನಾಯಕ ಹಾಗೂ ಮಂಗಳೂರು ಶಾಸಕ ಯು ಟಿ ಖಾದರ್ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಜಿ ಎಂ, ಅಬ್ದುಲ್ ರಝಕ್ ಚೌಕ, ಅಬ್ದುಲ್ ಹಮೀದ್, ಗಣ್ಯರಾದ ರಫೀಕ್ ಹಾಜಿ ಕೋಡಿಬೈಲು, ಅಬೂಬಕ್ಕರ್ ನಿರ್ಬೈಲು ಇನ್ನಿತರರು ಉಪಸ್ಥಿತರಿದ್ದರು