ಬಂಟ್ವಾಳ: ಬಂಟ್ವಾಳ ಕನ್ನಡ ಭವನದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಮಂಗಳೂರು ವಿವಿ ಕನಕದಾಸ ಸಂಶೋಧನಾ ಕೇಂದ್ರ ಸಂಯೋಜಕ ಡಾ. ಧನಂಜಯ ಕುಂಬ್ಳೆ ಕನಕ ಸಂದೇಶ ನೀಡಿ, ಪ್ರಬುದ್ಧ ಸಾಹಿತ್ಯ ಸೃಷ್ಟಿಯ ಮೂಲಕ ಸಮಾಜದ ವ್ಯವಸ್ಥೆಗೆ ಗಟ್ಟಿ ದನಿಯಾಗಿ,ಸಮಾನತೆಯನ್ನು ಸಾರುವ ಮಹತ್ವದ ಕೆಲಸವನ್ನು ಕನಕದಾಸರು ಮಾಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷರಾದ ಡಾ ಎಂ.ಪಿ.ಶ್ರೀನಾಥ್ ರಾಮಧಾನ್ಯ ಚರಿತೆಯ ಸಾರವು, ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಮಾಧವ ಮೂಡುಕೊಣಾಜೆ, ಗೌರವ ಕೋಶಾಧ್ಯಕ್ಷರಾದ ಬಿ.ಐತಪ್ಪ ನಾಯ್ಕ್, ಗೌರವ ಕಾರ್ಯದರ್ಶಿಗಳಾದ ಎಚ್. ವಿನಯ ಆಚಾರ್, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಾಳಾದ ಕೆ.ಸೇಸಪ್ಪ ರೈ ಕಡಬ, ಚಂದ್ರಶೇಖರ ಪೇರಾಲು ಸುಳ್ಯ, ಡಾ. ಡಿ. ಯದುಪತಿ ಗೌಡ ಬೆಳ್ತಂಗಡಿ, ಉಮೇಶ ನಾಯಕ್ ಪುತ್ತೂರು, ವಿಶ್ವನಾಥ ಬಂಟ್ವಾಳ, ಡಾ. ಮಂಜುನಾಥ ಎಸ್ ಮಂಗಳೂರು, ವೇಣುಗೋಪಾಲ ಶೆಟ್ಟಿ ಮೂಡಬಿದಿರೆ, ಮೋಹನದಾಸ ಸುರತ್ಕಲ್, ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಳ್ಳತ್ತಡ್ಕ,ತೇಜಸ್ವಿ ಅಂಬೆಕಲ್ಲು, ಸುಂದರ ನಾಯ್ಕ್ ಪುತ್ತೂರು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಜೇಶ್ವರಿ ಎಂ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
(more…)