??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಸುದ್ದಿಗೋಷ್ಠಿ
ಬಂಟ್ವಾಳ: ನವೆಂಬರ್ 12 ಮತ್ತು 13ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸ್ಪರ್ಧಾ ಸಮಿತಿಯ ಗೌರವಾಧ್ಯಕ್ಷ ರಾಘವೇಂದ್ರ ಭಟ್ ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಮೊಟೊ ಶೊಟೊಕಾನ್ ಕರಾಟೆ ಅಸೋಸಿಯೇಶನ್ ಮಂಗಳೂರು, ರೋಟರಿ ಕ್ಲಬ್ ನ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಸಿದ್ಧಕಟ್ಟೆ ಫಲ್ಗುಣಿ, ಬಿ.ಸಿ.ರೋಡ್ ಸಿಟಿ ಮತ್ತು ಮೊಡಂಕಾಪು ಘಟಕಗಳ ಆಶ್ರಯದಲ್ಲಿ ಸ್ಪರ್ಧೆ ಕಟ ಮತ್ತು ಕುಮಿಟೆ ವಿಭಾಗದಲ್ಲಿ ನಡೆಯಲಿದ್ದು, ಸುಮಾರು 1500 ಸ್ಪರ್ಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು. ಕರಾಟೆಯಲ್ಲಿ ಕುಬುಡೊ ಎಂಬ ಕಲೆ ಅಳಿವಿನಂಚಿಗೆ ಬಂದಿದ್ದು, ಅದನ್ನು ಉಳಿಸಲು ವಿಶೇಷವಾಗಿ ಕರಾಟೆಯ ಕುಬುಡೊ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ದಿ.ರಮೇಶ ಬಂಗೇರ 1996ರಲ್ಲಿ ರೋಟರಿ ಬಾಲಭವನದಲ್ಲಿ ಕರಾಟೆಯನ್ನು ಆರಂಭಿಸಿದ್ದರು ಎಂದು ನೆನಪಿಸಿದ ಅವರು, ರೋಟರಿ ಸಂಸ್ಥೆ ಈ ನಿಟ್ಟಿನಲ್ಲಿ ಕರಾಟೆಯನ್ನು ಗ್ರಾಮೀಣ ಜನರಿಗೆ ಪ್ರಯೋಜನಕಾರಿಯನ್ನಾಗಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಶಾಜು ಮುಲವಾನ, ಕಾರ್ಯದರ್ಶಿ ವಿಜಯ ಫೆರ್ನಾಂಡಿಸ್, ಕೋಶಾಧಿಕಾರಿ ಜೆರಾಲ್ಡ್ ಫೆರ್ನಾಂಡೀಸ್, ಜೊತೆ ಕಾರ್ಯದರ್ಶಿ ಅಶೋಕ್ ಆಚಾರ್ಯ, ಪ್ರಮುಖರಾದ ಸತೀಶ್ ಕುಮಾರ್, ಪ್ರಕಾಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.