ಕಲ್ಲಡ್ಕ

ಕಲ್ಲಡ್ಕದಲ್ಲಿ ಹೆದ್ದಾರಿ ಕಾಮಗಾರಿಯ ಹೊಂಡಕ್ಕಿಳಿದ ವ್ಯಕ್ತಿ ಮಾಡಿದ್ದೇನು?

ಬಂಟ್ವಾಳ: ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾದ ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಉದ್ಭವವಾದ ನೀರಿನ ಹೊಂಡದಲ್ಲಿ ವ್ಯಕ್ತಿಯೊಬ್ಬ ಇಳಿದು ಈಜುವಂತೆ ನೀರಾಟವಾಡುವ ದೃಶ್ಯ ಕಂಡುಬಂತು.

ಬಿ.ಸಿ.ರೋಡ್ ನಿಂದ ಮಾಣಿವರೆಗೆ ರಸ್ತೆ ಕಾಮಗಾರಿ ನಡೆಯುವ ವೇಳೆ ಅಲ್ಲಲ್ಲಿ ಹೊಂಡಗಳು, ದಿಢೀರನೆ ಇರುವ ಡೈವರ್ಶನ್ ಗಳ ಕಾರಣ ವಾಹನ ಸವಾರರು ಗೊಂದಲಕ್ಕೊಳಗಾಗುತ್ತಿದ್ದರೆ, ಇನ್ನೂ ಸುರಿಯುತ್ತಿರುವ ಮಳೆಯಿಂದ ಹೊಂಡದ ಆಳ ಗೊತ್ತಾಗದೆ ವಾಹನವೂ ಜಖಂಗೊಳ್ಳುತ್ತಿವೆ. ಈ ಮಧ್ಯೆ ಕಲ್ಲಡ್ಕ ಪೇಟೆಯಲ್ಲಿ ವಾಹನದಟ್ಟಣೆ ವಿಪರೀತವಾಗುತ್ತಿದ್ದು, ಪೀಕ್ ಅವರ್ ನಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಕಲ್ಲಡ್ಕದಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣಕ್ಕೆ ರಸ್ತೆ ಮಧ್ಯ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಅಗೆಯಲಾದ ಹೊಂಡ ಮತ್ತಷ್ಟು ಅಗಲವಾಗಿದ್ದು, ಅಪಾಯಕಾರಿಯಾಗಿದೆ.

ಇದನ್ನು ಗುರುತುಹಚ್ಚಲು ಪ್ಲಾಸ್ಟಿಕ್ ಟೇಪ್ ಅನ್ನು ಸುತ್ತಲೂ ಕಟ್ಟಲಾಗಿದ್ದು, ಯಾರೂ ಆ ಭಾಗದಲ್ಲಿ ಸಂಚರಿಸಬಾರದು ಎಂಬರ್ಥ ನೀಡುವ ಸೂಚನೆಯದು. ಆದರೆ ಮಾನಸಿಕ ಅಸ್ವಸ್ಥನಂತಿದ್ದ ವ್ಯಕ್ತಿಯೊಬ್ಬ ಅದ್ಯಾವುದನ್ನೂ ಗಮನಿಸದೆ ನೇರವಾಗಿ ಹೊಂಡಕ್ಕಿಳಿದಿದ್ದಾನೆ. ಈಜಾಡಿದ್ದಾನೆ. ಅಲ್ಲೇ ಸ್ನಾನ ಮಾಡುವಂತೆ ನೀರಲ್ಲಿ ಹೊರಳಿದ್ದಾನೆ. ಬಟ್ಟೆಯನ್ನು ಮೇಲಕ್ಕೆತ್ತಿ ಕುಣಿಯುವ ಪೋಸ್ ಕೊಟ್ಟಿದ್ದಾನೆ. ಇದು ಕುತೂಹಲಿಗರ ಮೊಬೈಲ್ ಗಳಿಗೆ ಆಹಾರವಾಗಿದೆ. ಇದನ್ನು ಚಿತ್ರೀಕರಿಸಿ, ಇದು ಕಲ್ಲಡ್ಕ, ಗುತ್ತಿಗೆ ಕಾಮಗಾರಿ ಕಂಪನಿಯವರು ಮಾಡಿದ ಹೊಂಡ, ಇನ್ನೇನೇನು ಕಾದಿದೆಯೋ ಎಂಬ ಉದ್ಗಾರದೊಂದಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿಯಬಿಡಲಾಗಿದೆ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ