ಬಂಟ್ವಾಳ

ಬಿ.ಸಿ.ರೋಡ್ ಪೊನ್ನೋಡಿಯಲ್ಲಿ ಯುವಕನ ಇರಿದು ಹತ್ಯೆ

ಬಂಟ್ವಾಳ: ಬಿ.ಸಿ.ರೋಡಿನ ಶಾಂತಿಅಂಗಡಿ ಸಮೀಪ ತಲಪಾಡಿ ಎಂಬಲ್ಲಿ ಸ್ಥಳೀಯ ಮಹಮ್ಮದ್ ಆಸಿಫ್ ಎಂಬಾತನನ್ನು ಸೋಮವಾರ ಮಧ್ಯರಾತ್ರಿ ಹತ್ಯೆ ನಡೆಸಲಾಗಿದೆ.

ಮಹಮ್ಮದ್ ನೌಫೆಲ್ ಮಾರಿಪಳ್ಳ  ಮಹಮ್ಮದ್ ನೌಸೀರ ಮಾರಿಪಳ್ಳ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಸ್ಕೂಟರ್ ಗೆ ಹಾರನ್ ಹಾಕಿದ ವಿಚಾರ ಮಾತಿಗೆ ಮಾತು ಬೆಳೆದು ಘಟನೆಗೆ ಕಾರಣ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾದೆ. ಬಿ ಮೂಡ ಗ್ರಾಮದ ಪೊನ್ನೊಡಿಯ ಹೋಟೇಲ್ ಹತ್ತಿರ ತಡರಾತ್ರಿ ಮಾತಿನ ಚಕಮಕಿ ನಡೆದು ಬಳಿಕ ಈ ಹತ್ಯೆ ನಡೆದಿದೆ. ಮೃತ ಆಸಿಫ್ ಗೆಳೆಯ ನೌಫಲ್ ಶಾಂತಿಯಂಗಡಿ ಅವರಿಗೂ ಘಟನೆಯಲ್ಲಿ ಗಾಯಗಳಾಗಿವೆ. ಈ ಕುರಿತು ಮೃತ ಆಸಿಫ್ ಗೆಳೆಯ ನೌಫಲ್ ಶಾಂತಿಯಂಗಡಿ ನೀಡಿದ ದೂರಿನಂತೆ, ಕೊಲೆಯಾದ  ಶಾಂತಿಯಂಗಡಿ ನಿವಾಸಿ ಆಸಿಫ್ ಗೂ ಆರೋಪಿಗಳಿಗೂ ಪೊನ್ನೋಡಿಯ ಹೋಟೆಲ್ ಬಳಿ ಮಾತಿನ ಚಕಮಕಿ ನಡೆದಿದ್ದು, ಸ್ನೇಹಿತನಿಗೆ ವಿಚಾರ ತಿಳಿಸಿದಾಗ, ವಿಚಾರಿಸಲು ತಾವು ಅಲ್ಲಿಗೆ ತೆರಳಿದ್ದಾಗ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ