Uncategorized

ತುಳುವಿನಲ್ಲಿ ನಾಮಫಲಕ: ಪಣೋಲಿಬೈಲ್ ನಲ್ಲಿ ಗಮನ ಸೆಳೆದ ಅಂಗಡಿ ಮಾಲೀಕರ ತುಳುಪ್ರೇಮ

ಬಂಟ್ವಾಳ: ಪಣೋಲಿಬೈಲು ದೈವಸ್ಥಾನದ ಬಳಿ ಇರುವ ಹೂವಿನಂಗಡಿಯ ನಾಮಫಲಕವನ್ನು ತುಳುವಿನಲ್ಲಿ ಹಾಕುವ ಮೂಲಕ ಇಲ್ಲಿನ ಅಂಗಡಿ ಮಾಲೀಕರು ತುಳು ಭಾಷಾ ಪ್ರೇಮವನ್ನು ಮೆರೆದಿದ್ದಾರೆ.

ತುಲುನಾಡ ಯುವಸೇನೆ ಬಂಟ್ವಾಳ ಇವರ ಮನವಿ ಮೇರೆಗೆ ಅಂಗಡಿ ಮಾಲೀಕರಾದ ರವೀಂದ್ರ ಕುಲಾಲ್ ಹಾಗೂ ಯೋಗಿನಿ ರವೀಂದ್ರ ಕುಲಾಲ್ ತಮ್ಮ ಹೂವಿನ ಅಂಗಡಿಗೆ ತುಲು ಲಿಪಿಯ ನಾಮ ಫಲಕವನ್ನು ಹಾಕಿಸಿದ್ದಾರೆ. ಸಜಿಪ ಗ್ರಾಮ ಪಂಚಾಯಿತಿ ಸದಸ್ಯರಾದ ಸೀತಾರಾಮ ಸಜಿಪ ಹಾಗೂ ರಮೇಶ್ ಕುಲಾಲ್ ಪಣೋಲಿಬೈಲು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತುಲುನಾಡ ಯುವಸೇನೆ ಯ ಉಪಾಧ್ಯಕ್ಷರಾದ ಪ್ರತೀಕ್ ತುಲುವೆ, ಖಜಾಂಚಿಯಾದ ಧೀರಜ್ ಕೋಟ್ಯಾನ್, ಸಹ ಕಾರ್ಯದರ್ಶಿಯಾದ ಲಿಖಿತ್ ರಾಜ್ ಸೆರ್ಕಳ ಹಾಗೂ ಸಂಘದ ಸದಸ್ಯರಾದ ರಿತೇಶ್ ಕುಲಾಲ್, ಶರಣ್ ಪಚ್ಚಿನಡ್ಕ ,ಅರುಣ್ ಕುಮಾರ್ ಹಾಗೂ ಸ್ಥಳೀಯರಾದ ನಾರಾಯಣ ಕುಲಾಲ್ ಪಣೋಲಿಬೈಲು,ಯೋಗಿಶ್ ಪೂಜಾರಿ ಪಣೋಲಿಬೈಲು, ಸುರೇಶ್ ಕುಲಾಲ್ ಪಣೋಲಿಬೈಲು, ಸತೀಶ್ ಕುಲಾಲ್ ಪಣೋಲಿಬೈಲು, ಪದ್ಮನಾಭ ಪೂಜಾರಿ ಪಣೋಲಿಬೈಲು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಲಿಖಿತ್ ರಾಜ್ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ