ವಿಟ್ಲ

ಒಡಿಯೂರು ಶ್ರೀಗಳ ಷಷ್ಟ್ಯಬ್ದ: ಕರೋಪಾಡಿ ಗ್ರಾಮದಲ್ಲಿ ಮನೆ ಮನೆ ಭಜನೆ

1 / 12

ಬಂಟ್ವಾಳ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ದ ಸಂಭ್ರಮ ಹಿನ್ನೆಲೆಯಲ್ಲಿ ಕರೋಪಾಡಿ ಗ್ರಾಮ ಸಮಿತಿ ವತಿಯಿಂದ ಮನೆ ಮನೆ ಭಜನಾ ಕಾರ್ಯಕ್ರಮ ನಡೆಯಿತು. ಮಾರ್ಚ್ ತಿಂಗಳಲ್ಲಿ ಗ್ರಾಮದಲ್ಲಿ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಭಜಕರು ಮನೆ ಮನೆಗಳಿಗೆ ತೆರಳಿ ಒಡಿಯೂರು ಶ್ರೀಗಳ ಸಂದೇಶವನ್ನು ಸಾರಿದರು. ಒಟ್ಟು ಆರು ವಾರ್ಡುಗಳಿಗೆ ಸಂಬಂಧಿಸಿ 780 ಮನೆಗಳಿಗೆ ಕಾಲ್ನಡಿಗೆಯಲ್ಲಿ ಸಾಗಿದ ಗ್ರಾಮದ ವಿವಿಧ ಭಜನಾ ಮಂದಿರ, ಮಂಡಳಿಗಳ ಸದಸ್ಯರು ಕೀರ್ತನೆಯ ಮೂಲಕ ಜ್ಞಾನವಾಹಿನಿಯ ಸಂದೇಶ ನೀಡಿದರು. ಮಾರ್ಚ್ 29ರ ಭಾನುವಾರ ಬೇಡಗುಡ್ಡೆ, ಏಪ್ರಿಲ್ 4ರಂದು ಒಡಿಯೂರು, ಮಿತ್ತನಡ್ಕ, ಪದ್ಯಾಣ, ಕುಡ್ಪಲ್ತಡ್ಕ, ಗುಂಡಮಜಲು ಹೀಗೆ ವಿವಿಧೆಡೆಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನದ ಹೊತ್ತಿನಲ್ಲಿ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಯಿತು. ಸಂಕೀರ್ತನೆಯೊಂದಿಗೆ ಮನೆ ಮನೆ ಸಂಪರ್ಕ ಜೊತೆಗೆ ಒಡಿಯೂರು ಶ್ರೀಗಳ ಸಂದೇಶ ತಲುಪಿಸುವ ಕಾರ್ಯಕ್ರಮ ಹಾಗೆಯೇ ಭಜನೆಯ ಮೂಲಕ ಜಾಗೃತಿ ಕಾರ್ಯ ಇದರೊಂದಿಗೆ ಸಂಪನ್ನಗೊಂಡಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ