ಬಂಟ್ವಾಳ

ಆಟೊ ಚಾಲಕ, ಮಾಲೀಕರಿಗೆ ಕಡೇಶಿವಾಲಯದಲ್ಲಿ ಕೊರೊನಾ ಜಾಗೃತಿ ಸಭೆ

ಬಂಟ್ವಾಳ: ಕಡೇಶಿವಾಲಯದಲ್ಲಿ ಜೇಸಿಐ ಜೋಡುಮಾರ್ಗ ನೇತ್ರಾವತಿ, ವಾತ್ಸಲ್ಯಮಯಿ  ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ. ಬಾಳ್ತಿಲ, ಕಡೇಶಿವಾಲಯ  ಗ್ರಾಮ ಪಂಚಾಯತ್, ದ.ಕ.ಪ್ರಾಥಮಿಕ ಶಾಲೆ ಪೆರ್ಲಾಪು ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ , ಆಟೋ ಚಾಲಕ ಮಾಲಕರಿಗೆ ಕೊರೋನಾ ಜಾಗೃತಿ ಸಭೆ ನಡೆಯಿತು. 

ವೈದ್ಯಾಧಿಕಾರಿ, ಡಾ.ರಾಜೇಶ್ ಪೂಜಾರಿ ಕೊರೋನ  ಮಾಹಿತಿ ನೀಡಿ  ಜನರೊಂದಿಗೆ ತಕ್ಷಣ ಸ್ಪಂದಿಸುವವರು ಆಟೋದವರು ಹಾಗಾಗಿ ಯಾವ ರೀತಿಯಲ್ಲಿ ಕೊರೋನಾದ ವಿರುದ್ಧ ಹೋರಾಡಬಹುದು, ಯಾವ ರೀತಿಯಲ್ಲಿ ಮುನ್ನಚ್ಚರಿಕೆ  ವಹಿಸಬೇಕು. ಕೊರೋನಾ ದಿಂದ ನಮ್ಮನ್ನು ಹೇಗೆ ಸಂರಕ್ಷಿಸಿ ಕೊಳ್ಳಬಹುದು ಎಂಬುದರ ಮಾಹಿತಿ ನೀಡಿದರು.

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಯ ಸಂಸ್ಥಾಪಕರು, ಜೇಸಿಐ ಅಧ್ಯಕ್ಷರು, ವಕೀಲರಾದ ಶೈಲಜಾ ರಾಜೇಶ್ ಮಾತನಾಡಿ, ಕಾನೂನು ಅನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೋನಾ ವಿರುದ್ಧ ಹೋರಾಡಲು ಸಲಹೆ ನೀಡಿದರು.

ಜಾಹೀರಾತು

ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿಗಾರ್, ಉಪಾಧ್ಯಕ್ಷರಾದ, ಜಯ ಆರ್ ದೇವಾಡಿಗ, ದೈಹಿಕ ಶಿಕ್ಷಕ ಭಾಸ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಚೆನ್ನಪ್ಪ ನಾಯ್ಕ, ಪಂಚಾಯತ್ ಕಾರ್ಯದರ್ಶಿ ಸಂಜೀವ ನಾಯ್ಕ , ಆರೋಗ್ಯ ಇಲಾಖೆಯ ನರ್ಸ್ ಲೀಲಾವತಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ