ಜಿಲ್ಲಾ ಸುದ್ದಿ

ನೇತ್ರಾವತಿ ನದಿಗೆ ಹಾರಿದ ಯುವಕನನ್ನು ರಕ್ಷಿಸಿದ ಗೂಡಿನಬಳಿಯ ಸತ್ತಾರ್

ಬಂಟ್ವಾಳ: ರಮ್ಝಾನ್ ಉಪವಾಸ ಹಿನ್ನೆಲೆಯಲ್ಲಿ ಸಂಜೆ ಮನೆಗೆ ತೆರಳುವ ಸಂದರ್ಭ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಸುದ್ದಿ ಕೇಳಿ, ಕೂಡಲೇ ಕಾರ್ಯಾಚರಣೆಯನ್ನು ನಡೆಸಿ, ಆತನನ್ನು ರಕ್ಷಿಸಿದ ಗೂಡಿನಬಳಿಯ ಸತ್ತಾರ್ ಅವರ ಸೇವಾಮನೋಭಾವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.ಶುಕ್ರವಾರ ಸಂಜೆ ನೇತ್ರಾವತಿ ನದಿಗೆ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ್ದನು. ಕೂಡಲೇ ಆತನನ್ನು ಸತ್ತಾರ್ ಮತ್ತವರ ಸ್ನೇಹಿತ ಸಾದಿಕ್ ರಕ್ಷಿಸದೇ ಇದ್ದರೆ, ಅನಾಹುತವಾಗುತ್ತಿತ್ತು. ರಮ್ಝಾನ್ ಉಪವಾಸದ ಹಿನ್ನೆಲೆಯಲ್ಲಿ ಸಂಜೆ ಮನೆಗೆ ತೆರಳುವ ಸಂದರ್ಭ ಸ್ಥಳೀಯ ಹುಡುಗರು ಯುವಕನೊಬ್ಬ ನೇತ್ರಾವತಿಗೆ ಹಾರಿದ ವಿಚಾರವನ್ನು ತಿಳಿಸಿದ್ದು ಕೂಡಲೇ ಸಾದಿಕ್ ಎಂಬವರ ಸಹಾಯದಿಂದ ಆತನನ್ನು ರಕ್ಷಿಸಿದ್ದು, ಜೀವ ಉಳಿಸಿದ್ದೇವೆ. ಯುವಕ ತನ್ನ ಮೊಬೈಲ್ ಅನ್ನು ಸೇತುವೆಯಲ್ಲಿ ಬಿಟ್ಟು ಹೋಗಿದ್ದ ಕಾರಣ ಕೂಡಲೇ ಅವರ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಯುವಕನ ಪ್ರಾಣ ಉಳಿಸಿದ್ದು ಸಮಾಧಾನಕರ ವಿಚಾರ ಎಂದು ಸತ್ತಾರ್ ಹೇಳಿದ್ದಾರೆ.

.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ