ಬಂಟ್ವಾಳ

ಲೊರೆಟ್ಟೊ ಮಾತಾ ಚರ್ಚ್ ಗೆ ಬಿಷಪ್ ಭೇಟಿ, ಗುರುದೀಕ್ಷೆ, ಬಲಿಪೂಜೆ ಅರ್ಪಣೆ

ಬಂಟ್ವಾಳ: ತಾಲೂಕಿನ ಲೊರೆಟ್ಟೊ ಮಾತಾ ಚರ್ಚ್ ಗೆ ಮಂಗಳೂರಿನ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಪೀಟರ್ ಪಾವ್ಲ್ ಸಲ್ದಾನಾ ಭೇಟಿ ನೀಡಿದರು. ಈ ಸಂದರ್ಭ ಲೊರೆಟ್ಟೊ ಚರ್ಚ್ ವ್ಯಾಪ್ತಿಯ ಕುರಿಯಾಳ ಗ್ರಾಮದ ಲೂಯಿಸ್ ಮತ್ತು ಬ್ರಿಡ್ಜಿಟ್  ಡೇಸಾ ದಂಪತಿ ಪುತ್ರರಾದ ವಂದನೀಯ ಮೆಲ್ವಿನ್ ಡೇಸಾ, ಎಸ್. ಜೆ .ಇವರಿಗೆ ಗುರುದೀಕ್ಷೆ ನೀಡಿ ಅವರಿಗಾಗಿ ಪ್ರಾರ್ಥಿಸಿದರು. ಅವರ ಕುಟುಂಬಸ್ಥರ ಹಾಗೂ ನೂರಾರು ಭಕ್ತರೊಂದಿಗೆ ಬಲಿಪೂಜೆ ಅರ್ಪಿಸಿದರು. ಇವರು ಗುಜರಾತ್ ಧರ್ಮಪ್ರಾಂತ್ಯದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಈ ಸಂದರ್ಭ ಧರ್ಮಾಧ್ಯಕ್ಷರು ಯೇಸುಕ್ರಿಸ್ತರ ಸೇವಾ ಹಾಗೂ ತ್ಯಾಗ-ಬಲಿದಾನಗಳ ಬೋಧನೆಯನ್ನು ನೀಡಿ ದರು. ಚರ್ಚಿನ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ  ಬಲಿ ಪೂಜೆಯಲ್ಲಿ ಪಾಲ್ಗೊಂಡ ಗುರುಗಳ ಪರವಾಗಿ ಅವರನ್ನು ಅಭಿನಂದಿಸಿದರು. ಗುಜರಾತ್  ಧರ್ಮಪ್ರಾಂತ್ಯದ ಎಸ್. ಜೆ.  ಪ್ರೋ ವಿನ್ಸಿಯಲ್ ಅವರ ಪ್ರತಿನಿಧಿಯಾಗಿರುವ ವಂದನೀಯ ಜೇಮ್ಸ್ ವಾಸ್, ಎಸ್ .ಜೆ. ಅವರು ಧರ್ಮಾಧ್ಯಕ್ಷರಿಗೆ ಗುರು ದೀಕ್ಷೆ ನೀಡುವಂತೆ ವರದಿ  ಒಪ್ಪಿಸಿದರು. ಮಂಗಳೂರು ಧರ್ಮಪ್ರಾಂತ್ಯದ ವಂದನೀಯ ವಿಜಯ್ ಮಚಾದೊ ರವರು ಧಾರ್ಮಿಕ  ವಿಧಿ ವಿಧಾನಗಳನ್ನು ನಿರೂಪಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ