ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಬಿ.ಸಿ.ರೋಡಿನಲ್ಲಿ ನಡೆದಿದ್ದು, ಈ ಸಂದರ್ಭ ವಕೀಲವೃತ್ತಿ ನಡೆಸುವ ಕ್ಲಬ್ ಸದಸ್ಯರನ್ನು ಸನ್ಮಾನಿಸಲಾಯಿತು.
ಅತಿಥಿ ನಿಯೋಜಿತ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ಕ್ಲಬ್ಬಿನ ಚಟುವಟಿಕೆಯ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು ಅಧ್ಯಕ್ಷತೆಯನ್ನು ಪದ್ಮನಾಭ ರೈ ವಹಿಸಿದ್ದರು, ಅಶಾಮಣಿ ಡಿ ರೈ, ದಯಾನಂದ ರೈ, ನರೇಂದ್ರನಾಥ ಭಂಡಾರಿ, ಸುರೇಶ್ ನಾವೂರು, ಜೀವನ್ ಲೋಯ್ಡ್ ಪಿಂಟೋ, ಯಶವಂತ್ ವಿಟ್ಲ, ಕಾವ್ಯಶ್ರೀ ಅವರನ್ನು ಅಡ್ವೋಕೇಟ್ ಡೇ ಅಂಗವಾಗಿ ಸನ್ಮಾನಿಸಲಾಯಿತು, ಅನ್ಸ್ ಮತ್ತು ಲೇಡಿ ರೋಟರಿಯನ್ಸ್ಗಳಿಗೆ, ಆನ್ಸ್ ಅಧ್ಯಕ್ಷೆ ಸವಿತಾ ಚಿತ್ತರಂಜನ್ ಶೆಟ್ಟಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿದ್ದು, ಇದರಲ್ಲಿ ವಿಜೇತರಾದ ಹಾಗೂ ಪಾಲ್ಗೊಂಡ ಸದಸ್ಯರಿಗೆ ಬಹುಮಾನ ವಿತರಣೆಯನ್ನು ಅನ್ಸ್ ವತಿಯಿಂದ ನೆರವೇರಿಸಲಾಯಿತು.ಅನ್ನೆಟ್ಸ್, ಅನ್ಸ್, ರೋಟರಿಯನ್ಸ್ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ವರ್ಷಾಚರಣೆಯನ್ನು ನಡೆಸಿದರು. ಅನ್ಸ್ ಕಾರ್ಯದರ್ಶಿ ಸುಪ್ರಿಯಾ ರಮೇಶ್ ಹಾಗೂ ಜೋಶ್ನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಕಿಶೋರ್ ವಂದಿಸಿದರು.