ಮತಾಂತರ ನಿಷೇಧ ಕಾನೂನು ಜಾರಿ ತರಬೇಕು, ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ರೂಪಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಬಂಟ್ವಾಳ ಉಪತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಗೋರಕ್ಷ ಪ್ರಮುಖ್ ಆಶೋಕ್ ಶೆಟ್ಟಿ ಸರಪಾಡಿ, ಧರ್ಮ ಪ್ರಸರಣ ಪ್ರಮುಖ್ ರಾಜಾರಾಮ್ ನಾಯಕ್, ಭಜರಂಗದಳದ ಸಹಸಂಚಾಲಜ ಭರತ್ ಕುಮ್ಡೆಲು, ಜಿಲ್ಲಾ ಸಹಸಂಯೋಜಕ್ ಗುರುರಾಜ್ ಬಂಟ್ವಾಳ, ತಾಲೂಕು ಸಂಚಾಲಕ ಶಿವಪ್ರಸಾದ್ ತುಂಬೆ, ಪ್ರಮುಖರಾದ ಲತೀಶ್ ರಾಮಲಕಟ್ಟೆ, ಜಿತೇಂದ್ರ ಅಜ್ಜಿಬೆಟ್ಟು, ವಿಶುಕುಲಾಲ್, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.