ಬಂಟ್ವಾಳ

ಪ್ರಕೃತಿಗೆ ವಿರುದ್ಧ ನಡೆದರೆ ಜೀವಸಂಕುಲ ವಿನಾಶದೆಡೆಗೆ: ಗೋಪಾಲ ಅಂಚನ್

ಜಾಹೀರಾತು

ಜಾಹೀರಾತು

ಪ್ರಕೃತಿಗೆ ವಿರುದ್ಧವಾಗಿ ಮಾನವ ಬದುಕಿದ ಪರಿಣಾಮ ಇಡೀ ಜೀವಸಂಕುಲ ವಿನಾಶದೆಡೆ ಸಾಗುತ್ತಿದೆ. ಮತ್ತೆ ಪ್ರಕೃತಿಗೆ ಮುಖಮಾಡಿ ಬದುಕುವುದೇ ಮಾನವಕುಲದ ಉಳಿವಿಗೆ ಇರುವ ಏಕೈಕ ಮಾರ್ಗವಾಗಿದೆ ಎಂದು ಪತ್ರಕರ್ತ ಗೋಪಾಲ ಅಂಚನ್ ಹೇಳಿದರು.

ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ ವತಿಯಿಂದ ಸೋರ್ನಾಡು ಲಯನ್ಸ್ ಕಚೇರಿಯಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರಕೃತಿ ಮಾನವನ ಆಹಾರ, ಆರೋಗ್ಯ, ನೆಮ್ಮದಿಗಾಗಿ ಎಲ್ಲವನ್ನೂ ನೀಡಿದೆ. ಆದರೆ ಮನುಷ್ಯರು ಆಧುನಿಕತೆ ಮತ್ತು ಆಡಂಬರದ ಭರಾಟೆಯಲ್ಲಿ ಪ್ರಕೃತಿಗೆ ವಿರುದ್ಧವಾಗಿ ಜೀವನಶೈಲಿಯನ್ನು ರೂಪಿಸಿಕೊಂಡ ಪರಿಣಾಮ ಇಂದು ಸಮಸ್ಯೆಗಳು ತಾಂಡವವಾಡುತ್ತಿದೆ. ಆಟಿಯ ಕಟ್ಟುಪಾಡುಗಳು ನಮ್ಮ ಹಿರಿಯರ ಪ್ರಕೃತಿಯೊಡನೆಯ ಸಹಜ ಬದುಕಿನ ಸಂಕೇತವಾಗಿ ನಮಗೆ ಮುಖಾಮುಖಿಯಾಗುತ್ತಿದೆ ಎಂದು ಅವರು ಹೇಳಿದರು.

ಲಯನ್ಸ್ ಅಧ್ಯಕ್ಷ ಜೋನ್ ಸಿರಿಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಿನೀತ್ ರೊಡ್ರಿಗಸ್, ಕೋಶಾಧಿಕಾರಿ ಎವ್ಜಿನ್ ಲೋಬೋ, ಜಿಲ್ಲಾ ಕೋಡಿನೇಟರ್ ಹ್ಯೂಬರ್ಟ್ ಲೋಬೋ, ನಿಕಟಪೂರ್ವಾಧ್ಯಕ್ಷ ಲಿಗೋರಿ ಲೋಬೋ, ಪಿ.ಜೆ.ರೋಡ್ರಿಗಸ್ ಮೊದಲಾದವರಿದ್ದರು. ಲಯನ್ಸ್ ಸದಸ್ಯರು ತಯಾರಿಸಿದ ಆಟಿಯ ತಿಂಡಿತಿನಸುಗಳೊಂದಿಗೆ ಸಹಭೋಜನ ನಡೆಯಿತು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ