ಸಿನಿಮಾ

ಹಿರಿಯ ಪತ್ರಕರ್ತ ಉದಯಕುಮಾರ್ ಪೈ ಬರೆದ ಸರಣಿ – ನಾನು ನೋಡಿದ ರಾಜಕುಮಾರ ಎಲ್ಲ ಕಂತುಗಳಿಗೆ ಕ್ಲಿಕ್ ಮಾಡಿರಿ

ಕನ್ನಡ ಚಲನಚಿತ್ರ ಪತ್ರಕರ್ತರ ಸಾಲಿನ ಮೇರುಶ್ರೇಣಿಯಲ್ಲಿದ್ದೂ, ಚಲನಚಿತ್ರ ಇತಿಹಾಸದ ಜ್ಞಾನಸಂಪನ್ನರಾಗಿದ್ದು, ಅಜ್ಞಾತವಾಗಿ ಉಳಿದವರು ಹಿರಿಯರಾದ ಉದಯಕುಮಾರ ಪೈಗಳು. 60ರ ದಶಕದಿಂದ ತೀರಾ ಇತ್ತೀಚಿನವರೆಗಿನ ಸಿನಿಮಾ ಲೋಕದ ಒಳಹೊರಗಿನ ವಿಚಾರಗಳನ್ನೆಲ್ಲಾ ಸಮರ್ಥವಾಗಿ ಅಷ್ಟೇ ನಿಖರವಾಗಿ ಹೇಳಬಲ್ಲ ಕೆಲವೇ ಕೆಲವು ಪತ್ರಕರ್ತರ ಪೈಕಿ ಉದಯಕುಮಾರ ಪೈ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ಸಿನಿಮಾ ಇತಿಹಾಸದ ಚಲಿಸುವ ವಿಶ್ವಕೋಶ, ಅಪಾರ ಸಾಹಿತ್ಯದ ಹಸಿವಿನ ಜ್ಞಾನದಾಹಿ, ನಿಗರ್ವಿ, ಸರಳಜೀವಿ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಅತ್ಯುತ್ತಮ ಲೇಖನಕ್ಕೆ ಕೊಡಮಾಡುವ ಪ್ರಥಮ ಪ್ರಶಸ್ತಿಗೆ ಪೈಯವರು ಭಾಜನರಾಗಿದ್ದರು. ಚಂದಮಾಮ, ಚಿತ್ರದೀಪ, ವಿಜಯಚಿತ್ರ, ರೂಪತಾರಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದ ಅವರು ವೃತ್ತಿಜೀವನದ ಕೊನೆಯ ಅವಧಿಯಲ್ಲಿ ಉದಯವಾಣಿಯಲ್ಲಿ ಕೆಲಸ ಮಾಡಿದ್ದರು. ಅವರು ನಮ್ಮನ್ನಗಲಿದ್ದಾರೆ. 2016ರಲ್ಲಿ ಬಂಟ್ವಾಳನ್ಯೂಸ್ ಆರಂಭಗೊಂಡಾಗ ಹರಸಿದ್ದ ಅವರು ಕಳೆದ ವರ್ಷ ಪ್ರೀತಿಯಿಂದ ಸರಣಿ ಲೇಖನಗಳನ್ನು ಒದಗಿಸಿದ್ದರು. ಅದು ಡಾ. ರಾಜ್ ಕುಮಾರ್ ಜೊತೆ ಅವರ ಒಡನಾಟದ ನೆನಪಿನ ಗುಚ್ಛ, ಅದಕ್ಕೆ ಅವರೇ ಇಟ್ಟ ಟೈಟಲ್ ನಾನು ನೋಡಿದ ರಾಜಕುಮಾರ. ಅದರಲ್ಲವರು ಚೆನ್ನೈನ ಅನುಭವಗಳನ್ನೆಲ್ಲ ಒಂದೊಂದಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಇನ್ನಷ್ಟು ಬರೆಯುವವರಿದ್ದರು. ಆದರೆ ವಿಧಿಯ ಆಟವೇ ಬೇರೆ. ಇಂದು ಅವರು ನಮ್ಮೊಂದಿಗಿಲ್ಲ. ಆದರೆ ಅವರ ಬರೆಹಗಳು ಶಾಶ್ವತವಾಗಿವೆ. ಡಾ. ರಾಜ್ ಕುರಿತು ಅವರು ಬರೆದ ಸರಣಿಯ ಕಂತುಗಳ ಲಿಂಕ್ ಇಲ್ಲಿದೆ. ಇದು ನಿಮಗೆ ಇತಿಹಾಸವನ್ನು ಕಟ್ಟಿಕೊಡುವುದಂತೂ ಗ್ಯಾರಂಟಿ. ಉದಯಕುಮಾರ ಪೈಗಳಿಗೆ ಬಂಟ್ವಾಳನ್ಯೂಸ್ ನಿಂದ ಭಾವಪೂರ್ಣ ಶ್ರದ್ಧಾಂಜಲಿ

ಜಾಹೀರಾತು

-ಹರೀಶ ಮಾಂಬಾಡಿ, ಸಂಪಾದಕ

*ಸರಣಿ -1: ನಾನು ನೋಡಿದ ರಾಜಕುಮಾರ*

https://bantwalnews.com/2019/04/23/rajkumar/

ಜಾಹೀರಾತು

*ಸರಣಿ – 2 ಚಿತ್ರಾನ್ನ ಕಾಲದ ನೆನಪುಗಳು*

https://bantwalnews.com/2019/04/24/rajkumar-2/

*ಸರಣಿ -3 : ನಾನು ನೋಡಿದ ರಾಜಕುಮಾರ*

ಜಾಹೀರಾತು

https://bantwalnews.com/2019/04/25/rajkumar-3/

*ಸರಣಿ – 4: ಸಾಹಿತ್ಯ, ಸಮಾಜವಾದದೊಂದಿಗೆ ನಾಟಕ*

https://bantwalnews.com/2019/04/29/rajkumar-4/

ಜಾಹೀರಾತು

*ಸರಣಿ – 5: ನಾನು ನೋಡಿದ ರಾಜಕುಮಾರ*

https://bantwalnews.com/2019/05/08/rajkumar-5/

*ಸರಣಿ – 6: ಮದ್ರಾಸ್ ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮ ಉದ್ಘಾಟಿಸಿದ್ದರು ಡಾ. ರಾಜ್*

ಜಾಹೀರಾತು

https://bantwalnews.com/2019/05/11/doordarshan/

*ಸರಣಿ – 7: ಸಿನಿಮಾ ಪತ್ರಿಕೆ ಸೇರಿದ್ದು, ಮತ್ತೆ ಡಾ. ರಾಜ್ ಭೇಟಿಗೆ ಅವಕಾಶ*

https://bantwalnews.com/2019/06/14/rajkumar-7/

ಜಾಹೀರಾತು

*ಸರಣಿ – 8: ಆ ಸಂದರ್ಶನದಲ್ಲಿ ಡಾ. ರಾಜ್ ಏನು ಹೇಳಿದ್ದರು ಗೊತ್ತಾ?*

https://bantwalnews.com/2019/07/06/rajkumar-8/

ಜಾಹೀರಾತು

 

ಜಾಹೀರಾತು

 

 

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ