ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದ ನೆಲ್ಲಿಗುಡ್ಡೆ ಆಗರ್ಥ್ಯ ಎಂಬಲ್ಲಿ ಶ್ರೀನಿವಾಸ್ ನಾಯಕ್ ಅವರ ಕೃಷಿ ಭೂಮಿಗೆ ನೀರು ನುಗಿದ್ದು ಅಪಾರ ನಷ್ಟವಾಗಿದೆ .ಹೊಳೆಯ ನೀರು ತೋಟಕ್ಕೆ ನುಗ್ಗಿದ ಕಾರಣ ಅಡಿಕೆ,ತೆಂಗಿನ ಮರ ಹಾಗೂ ಕಾಳು ಮೆಣಸು ಗಿಡಗಳಿಗೆ ಹಾನಿಯಾಗಿವೆ. 2 ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮ ಶೇಖರ್ ಜೈನ್, ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ ಸೋಜಾ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .