ಕವರ್ ಸ್ಟೋರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 939 ಹೊಸ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

  • ರಾಜ್ಯದಲ್ಲಿ 70 ಸಾವು, ಇಂದು 2798 ಮಂದಿಗೆ ಸೋಂಕು

Harish Mambady,  www.bantwalnews.com

ದಿನಾಂಕ – ಜುಲೈ 4, 2020

ಜಾಹೀರಾತು

ಕೊರೊನಾ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ನೀಡಿದವರ ಸಂಖ್ಯೆ: 15,270. ಪಾಸಿಟಿವ್ 1095.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 75. ಒಟ್ಟು ಸೋಂಕಿತರ ಸಂಖ್ಯೆ 1095. ಚಿಕಿತ್ಸೆ ಪಡೆಯುತ್ತಿರುವವರು 557. ಗುಣಮುಖರಾಗಿ ಹೊರಗೆ ಬಂದವರು 516. ಮೃತಪಟ್ಟವರು 22.

ದಿನಾಂಕ – ಜುಲೈ 11, 2020

ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 22,832. ಪಾಸಿಟಿವ್ 2,034. ಇಂದು ಸೋಂಕಿತರು 186. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 782.  ಚಿಕಿತ್ಸೆ ಪಡೆಯುತ್ತಿರುವವರು 1211. ಮೃತಪಟ್ಟವರು 38.

ಜಾಹೀರಾತು

ಒಂದು ವಾರದಲ್ಲಿ ಏನೇನಾಯಿತು?

ಒಟ್ಟು 7562 ಮಂದಿಯ ಗಂಟಲು ದ್ರವ ಮಾದರಿಯ ತಪಾಸಣೆ ನಡೆದಿದೆ. ಅವರ ಪೈಕಿ 939 ಮಂದಿಗೆ ಸೋಂಕು ದೃಢಪಟ್ಟಿದೆ. 266 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಶನಿವಾರ ಸೋಂಕಿತರ ಒಟ್ಟು ಸಂಖ್ಯೆ 1 ಸಾವಿರ ದಾಟಿದರೆ, ಈ ಶನಿವಾರ 2 ಸಾವಿರ ದಾಟಿದೆ. ಕಳೆದ ಶನಿವಾರ ಹೊಸ ಪ್ರಕರಣಗಳು 75 ಇದ್ದರೆ ಈ ಶನಿವಾರ ಹೊಸ ಪ್ರಕರಣಗಳು 186.

ಜಾಹೀರಾತು

ರಾಜ್ಯದ ಇಂದಿನ ಸ್ಥಿತಿ ಹೀಗಿದೆ

ರಾಜ್ಯದಲ್ಲಿ ಇಂದು 70 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಒಂದೇ ದಿನ 2798 ಮಂದಿಗೆ ಸೋಂಕು ತಗಲಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯೇ 20,883 ಇದ್ದರೆ, ಒಟ್ಟು 36,216 ಮಂದಿಗೆ ಸೋಂಕು ತಗಲಿದಂತಾಗಿದೆ. ಐಸಿಯುನಲ್ಲೇ 504 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬಿಡುಗಡೆಯಾದ 880 ಸೇರಿ ಒಟ್ಟು 14,716 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 613 ಮಂದಿ ಇಡೀ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ ಇಂದು 1533 ಹೊಸ ಸೋಂಕು ಸೇರಿ 12,793 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನ 16,862 ಮಂದಿಗೆ ಸೋಂಕು ತಗಲಿದ್ದು, 3839 ಮಂದಿಯಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 229 ಮರಣ ಹೊಂದಿದ್ದಾರೆ. ಅದರ ನಂತರದ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯದ್ದಾಗಿದೆ. ಇಂದು 186 ಪ್ರಕರಣ ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 2,026ಕ್ಕೇರಿದೆ. 14 ಮಂದಿ ಬಿಡುಗಡೆ ಹೊಂದಿದ್ದು, ಒಟ್ಟು 746 ಡಿಸ್ಚಾರ್ಜ್ ಆಗಿದ್ದಾರೆ. 1242 ಸಕ್ರಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಉಡುಪಿಯಲ್ಲಿ ಇಂದು 90 ಹೊಸ ಕೇಸ್ ಬಂದಿರುವುದು ಆತಂಕಕಾರಿ.

ಬಂಟ್ವಾಳ ತಾಲೂಕಿನಲ್ಲಿ ಇಂದು ಒಟ್ಟು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಮೂರು ದಿನಗಳಲ್ಲಿ ಒಟ್ಟು 61 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಇಂದು ಪುದು ಗ್ರಾಮದ 85 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು 6 ಮಂದಿ ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ. ಬಂಟ್ವಾಳ ಕಸ್ಬಾ ಗ್ರಾಮದಲ್ಲಿ 4, ಕಲ್ಲಡ್ಕದಲ್ಲಿ 1 ಮತ್ತು ಪುದು ಗ್ರಾಮದಲ್ಲಿ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ ಸುಮಾರು 75ಕ್ಕೂ ಅಧಿಕ ಮಂದಿಗೆ ತಾಲೂಕಿನಲ್ಲಿ ಸೋಂಕು ದೃಢಪಟ್ಟಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ