ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 124ನೇ ಜಯಂತಿ ಪ್ರಯುಕ್ತ ನುಡಿನಮನ ಕಾರ್ಯಕ್ರಮ ಕಲ್ಲಡ್ಕದ ನೇತಾಜಿ ಯುವಕ ಮಂಡಲದಲ್ಲಿ ನಡೆಯಿತು.,
ಮುಖ್ಯ ಅತಿತಿಯಾಗಿ ಶ್ರೀರಾಮ ವಿದ್ಯಾಕೇಂದ್ರದ ಪ್ರಾಧ್ಯಾಪಕ ಜಿನ್ನಪ್ಪ ಭಾಗವಹಿಸಿದ್ದರು. ನೇತಾಜಿ ಯುವಕ ಮಂಡಲ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಯುವಕ ಮಂಡಲ ಅಧ್ಯಕ್ಷ ರಾಜೀವ ಕೊಟ್ಟಾರಿ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ,ರವಿಶಂಕರ್ ಗುರೂಜಿ ಸತ್ಸಂಗ ಸಮಿತಿಯ ಸರಸ್ವತಿ ಭಟ್ ಉಪಸ್ಥಿತರಿದ್ದರು. ಗೋಪಾಲ ಬಲ್ಯಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.