ಬಂಟ್ವಾಳ

ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ

ಜ.11ರಿಂದ ಜ. 18ರವರೆಗೆ ನಡೆಯಲಿರುವ ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ದ ನವೀಕರಣ ಪುನಃ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಅಂಗವಾಗಿ ಪೂರ್ವಭಾವಿ ಯಾಗಿ ಡಿ.22ರಂದು ಆದಿತ್ಯವಾರ ಪ್ರಧಾನ ಅರ್ಚಕ ವೆಂಕಟದಾಸ್ ಭಟ್ ಅವರ ಪೌರೋಹಿತ್ಯ ದಲ್ಲಿ ವಾಸ್ತಶಿಲ್ಪಿ ದೆಚ್ಚಾರು ಗಣಪತಿ ಶೆಣ್ಯೆ ಅವರ ಹಸ್ತದಲ್ಲಿ ಚಪ್ಪರ ಮೂರ್ತ ನಡೆಯಿತು.

ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಚಪ್ಪರ ಮೂರ್ತ ನಡೆದ ಬಳಿಕ ಬ್ರಹ್ಮಕಲಶೋತ್ಸವ ಮತ್ತು ಜಾತ್ರಮಹೋತ್ಸವ ವೆರೆಗೂ ನಿತ್ಯವೂ ಜಾತ್ರೆಯ ವಾತವರಣ ಇರುತ್ತದೆ.  ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಬ್ರಹ್ಮಕಲಶೋತ್ಸವ ನಡೆಯಲು ಇಂದಿನ ಚಪ್ಪರ ಮೂರ್ತ ಸಾಕ್ಷಿಯಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಗ್ರಾಮದ ಜನರು ಹಾಗೂ ಊರಪರ ಊರ ಭಕ್ತಾದಿಗಳ ಸಹಕಾರದ ಜೊತೆಯಲ್ಲಿ ನಿರ್ವಿಘ್ನವಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ,  ಎಂದು ಅವರು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂದ ತೀರ್ಥ, ಬ್ರಹ್ಮಕಲಶೋತ್ಸವ ಸಮತಿ ಕಾರ್ಯಧ್ಯಕ್ಷ ಮುರಳೀದರ ಭಟ್ ಹಳೇಗೇಟು, ಗೌರವ ಸಲಹೆಗಾರ ಹರಿಶ್ಚಂದ್ರ ಭಟ್, ಆಡಳಿತ ಮೊಕ್ತೇಸರ ರಾಮಚಂದ್ರ ಭಟ್, ಪ್ರಮುಖರಾದ ದೇವಪ್ಪ ಕುಲಾಲ್ , ಕರುಣೇಂದ್ರ ಪೂಜಾರಿ, ರಾಮಚಂದ್ರಗೌಡ, ರಾಜೇಶ್ ನೆಕ್ಕರೆ, ಸುರೇಶ್ ಕುಲಾಲ್ ಬೀದಿ, ಮನ್ಮಥ್ ರಾಜ್ ಕಾಜವ, ಸದಾನಂದ ನಾವೂರ, ಮನೋಹರ ಹಳೇಗೇಟು, ಗ್ರಾಮ ಸಮಿತಿ ಮುಖ್ಯಸ್ಥರು, ಬ್ರಹ್ಮ ಕಲಶೋತ್ಸವ ಸಮಿತಿ ಮುಖ್ಯಸ್ಥರು, ಮಹಿಳಾ ಸಮಿತಿ ಸದಸ್ಯರು ಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ