ಬಂಟ್ವಾಳ

ಬಂಟ್ವಾಳದಲ್ಲಿ ಮಾನವ ತ್ಯಾಜ್ಯ ಕಲ್ಮಶ ಸಂಸ್ಕರಣಾ ಘಟಕಕ್ಕೆ ಚಿಂತನೆ: ರಾಜೇಶ್ ನಾಯ್ಕ್

ನೇತ್ರಾವತಿ ನದಿಗೆ ಕಲ್ಮಶಗಳನ್ನು ಹಾಕುವ ಬದಲು ತ್ಯಾಜ್ಯಗಳನ್ನು ಸಂಪೂರ್ಣ ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯಬೇಕಿದ್ದು, ಬಂಟ್ವಾಳದಲ್ಲಿ ಮಾನವ ತ್ಯಾಜ್ಯ ಕಲ್ಮಶ ಸಂಸ್ಕರಣಾ ಘಟಕ (ಎಫ್. ಎಸ್.ಎಸ್.ಎಂ.) ವನ್ನು ಒದಗಿಸಲು ಪ್ರಯತ್ನ ಸಾಗಿದೆ ಎಂದು ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಹೇಳಿದರು.

ಜಾಹೀರಾತು

ಪಾಣೆಮಂಗಳೂರಿನಲ್ಲಿ ಹಾಸ್ಟೆಲ್ ಭೇಟಿ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದಅವರು ಕೇಂದ್ರದ ಸ್ವಚ್ಛ ಭಾರತದ ನೀತಿಯಲ್ಲಿ ಅಳವಡಿಸಲಾಗುವ ಫೀಶಿಯಲ್ ಸ್ಲಡ್ಜ್ ಎಂಡ್ ಸೆಪ್ಟೇಜ್ ಮೇನೇಜ್ ಮೆಂಟ್ (ಎಫ್.ಎಸ್.ಎಸ್.ಎಂ) ಅನ್ನು ರಾಜ್ಯ ಜಾರಿಗೊಳಿಸುತ್ತಿದ್ದು, ಒಟ್ಟು 55 ಪಟ್ಟಣ ಹಾಗೂ ಅರೆಪಟ್ಟಣಗಳನ್ನು ಆರಂಭಿಕ ಹಂತದಲ್ಲಿ ಒಳಗೊಳ್ಳುತ್ತದೆ. ಇವುಗಳಲ್ಲಿ ಬಂಟ್ವಾಳವನ್ನು ಸೇರಿಸಬೇಕು ಎಂದು ಇದರ ಯೋಜನಾ ಪ್ರಮುಖರ ಬಳಿ ತಾನು ಒತ್ತಾಯಿಸಿದ್ದು, ಬಂಟ್ವಾಳವನ್ನು ಸೇರ್ಪಡೆಗೊಳಿಸಬಹುದು ಎಂಬ ವಿಶ್ವಾಸ ತನಗಿದೆ. ಯುಜಿಡಿಯಡಿ ಇದುವರೆಗೆ ನಡೆದ ಯಾವುದೇ ಕಾರ್ಯಗಳೂ ಸಂಪೂರ್ಣವಾಗದೇ ಇರುವುದು ಹಾಗೂ ಇದಕ್ಕೆ ಕೆಲವೆಡೆ ಅಡೆತಡೆಗಳಿರುವ ಕಾರಣ ಬಂಟ್ವಾಳದಲ್ಲಿ ಒಳಚರಂಡಿ ಯೋಜನೆ ಸಮರ್ಪಕವಾಗಿ ಜಾರಿಗೊಂಡಿಲ್ಲ. ಈ ಯೋಜನೆ ಯುಜಿಡಿಯ ಮಾದರಿಯಲ್ಲಿಲ್ಲ, ಇದು ಸಂಪೂರ್ಣ ವೈಜ್ಞಾನಿಕವಾಗಿ ಆಗುವಂಥದ್ದು ಎಂದರು.

ನೇತ್ರಾವತಿ ನದಿಗೆ ಕಲ್ಮಶಗಳು, ತ್ಯಾಜ್ಯಗಳನ್ನು ಹಾಕುವುದು ಸಲ್ಲದು. ಈ ವಿಚಾರವಾಗಿ ತಾನು ಹಿಂದೆಯೇ ಹೋರಾಟಗಳನ್ನು ನಡೆಸಿದ್ದು, ಬಂಟ್ವಾಳವನ್ನು ಸ್ವಚ್ಛ ಹಾಗೂ ತ್ಯಾಜ್ಯಮುಕ್ತವನ್ನಾಗಿಸಲು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆನ್ನುವ ಇಚ್ಛೆ ಇದ್ದು, ಮಾನವ ತ್ಯಾಜ್ಯ ಕಲ್ಮಶ ಸಂಸ್ಕರಣಾ ಘಟಕದಿಂದ ಇದು ಸಾದ್ಯವಾಗಬಹುದು ಎಂದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ