ಬಂಟ್ವಾಳ

ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ನಾಮಾರ್ಚನೆ, ವಿಷ್ಣು ಸಹಸ್ರನಾಮ ಹವನ

ಬಂಟ್ವಾಳ: ಕೂಟ ಮಹಾಜಗತ್ತು ಸಾಲಿಗ್ರಾಮದ ಬಂಟ್ವಾಳ ಅಂಗಸಂಸ್ಥೆ ಹಾಗೂ ಕೂಟಮಹಾಜಗತ್ತು ಮಹಿಳಾ ವೇದಿಕೆ ಬಂಟ್ವಾಳ ಪ್ರಾಯೋಜಕತ್ವದಲ್ಲಿ ಲಕ್ಷ ನಾಮಾರ್ಚನೆ ಸಹಿತ ಸದ್ಗ್ರಹ ವಿಷ್ಣು ಸಹಸ್ರನಾಮ ಹವನವನ್ನು ವೇದಮೂರ್ತಿ ಶಿವರಾಮ ಮಯ್ಯ ಪೌರೋಹಿತ್ಯದಲ್ಲಿ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಿತು.

ಜಾಹೀರಾತು

ಯಾಗದಲ್ಲಿ ವಿಶೇಷವಾಗಿ ದೀಕ್ಷೆ ಪಡೆದ 151 ಮಂದಿ ಕರ್ತೃಗಳು ಸಹಸ್ರನಾಮಾರ್ಚನೆ ಪಠಣಗಳೊಂದಿಗೆ ಲಕ್ಷ ತುಳಸಿ ಹಾಗೂ ಪರಮಾತ್ಮ ಶ್ರೀ ವಿಷ್ಣು ದೇವರಿಗೆ ಪ್ರಿಯವಾದ ತಾವರೆ ಹಾಗೂ ಕೆಂದಾವರೆ, ಮಲ್ಲಿಗೆ ಗಳಿಂದ ಅರ್ಚನೆಯನ್ನು ಪುರೋಹಿತರಾದ ರಾಜ ಐತಾಳ್ ಪೊಳಲಿ ಅವರೊಂದಿಗೆ ಕೂಟಮಹಾಜಗತ್ತು ಬಂಟ್ವಾಳ ಅಧ್ಯಕ್ಷರಾದ ನ್ಯಾಯವಾದಿ ನಾರಾಯಣ ಸೋಮಯಾಜಿ ಫರಂಗಿಪೇಟೆ ಮತ್ತು ಮಹಿಳಾ ವೇದಿಕೆ ಅಧ್ಯಕ್ಷರಾದ ವಿಜಯಲಕ್ಷ್ಮಿ ಸೀತಾರಾಮ್  ನೇತೃತ್ವದಲ್ಲಿ ನಡೆಸಲಾಯಿತು.

ಪ್ರಾತಃಕಾಲ 8 ಗಂಟೆಯಿಂದ ಎಲ್ಲ ಕರ್ತೃಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಜಗತ್ ಮಂದಿರದಲ್ಲಿ ನಿರ್ಮಿಸಲಾದ ಯಾಗಮಂಟಪದಲ್ಲಿ ಪೂಜಾ ಹವನ ಕಾರ್ಯಕ್ರಮಗಳನ್ನು ನಡೆಸಿದರು. ಪೂರ್ಣಾಹುತಿ ಬಳಿಕ ಅನ್ನಸಂತರ್ಪಣೆ ನಡೆಯಿತು. ಬಂಟ್ವಾಳ ಸುತ್ತಮುತ್ತಲಿನ 500ಕ್ಕೂ ಅಧಿಕ ಮಂದಿ ಆಗಮಿಸಿ ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ