ಪುದು ಗ್ರಾಮದ ಹತ್ತನೇ ಮೈಲುಗಲ್ಲು ನಿವಾಸಿ ಸಿರಾಜ್ ಯಾನೆ ಮಹಮ್ಮದ್ ಇಸ್ಮಾಯಿಲ್ (19) , ಶಾಕೀರ್ (18) ಬಂಧಿತರು.
ಇವರಿಂದ ಸುಲಿಗೆ ಗೈದ 25,ಸಾ- ರೂ ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ರಿಡ್ಜ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಎಸ್ . ಪಿ . ಲಕ್ಷ್ಮಿ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಎಎಸ್ಪಿ ಸೈದುಲ್ ಅದಾವತ್, ನಿರ್ದೇಶನದಂತೆ, ಬಂಟ್ವಾಳ ವೃತ್ತ ಪೊಲೀಸ್ ನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರ ನೇತೃತ್ವದಲ್ಲಿ, ಹಾಗೂ ಬಂಟ್ವಾಳ ನಗರ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ್ , ಹರೀಶ್ ಎಂ.ಆರ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಗಳಾದ ಎ.ಎಸ್.ಐ ಸಂಜೀವ್, ಗಿರೀಶ್, ವಿವೇಕ, ಕುಮಾರ್, ನಜೀರ್, ಮಲ್ಲಿಕ್ , ರಾಘವೇಂದ್ರ ಕಂಪ್ಯೂಟರ್ ವಿಭಾಗದ ಸಂಪತ್ , ದಿವಾಕರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. .