ಬಂಟ್ವಾಳ

ಊರ ಹಿರಿಯರಿಂದ ವಿದ್ಯಾರ್ಥಿಗಳಿಗೆ ಕೃಷಿ ಪಾಠ


ಬಂಟ್ವಾಳ ತಾಲೂಕಿನ ಆಚಾರಿಪಲ್ಕೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ 25ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಳ್ದೋಡಿಯ ಲಿಂಗಮ್ಮ ಮತ್ತು ಮಕ್ಕಳು ನಡೆಸುವ ಕೃಷಿ ಚಟುವಟಿಕೆಯ ಪಾಠವನ್ನು ಒಂದು ದಿನದ ಕಾರ್ಯಾನುಭವ ಪಡೆಯುವ ಮೂಲಕ ಕಲಿತುಕೊಂಡರು.

ಕೃಷಿ ಚಟುವಟಿಕೆ, ಬತ್ತದ ನೇಜಿ ನಾಟಿ ಮಾಡುವ ಕುರಿತು, ಗದ್ದೆಯಲ್ಲಿ ಕೆಲಸ ಮಾಡುವ ಹಿರಿಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಅವರಿಗೆ ಕೃಷ್ಣಪ್ಪ ಅವರು ನೇಜಿ ತೆಗೆಯುವ ವಿಧಾನವನ್ನು ಹೇಳಿಕೊಟ್ಟರು. ನಂತರ ಕೆಸರಲ್ಲಿ ಇಳಿದು, ಕೃಷಿ ಗೀತೆಗಳನ್ನು ಹಾಡಿ, ಸಂಧಿ ಪಾಡ್ದನಗಳಿಗೆ ಉತ್ತರಿಸಿ, ಸಂತಸದಿಂದ ನಾಟಿ ಕಾರ್ಯದಲ್ಲಿ ತೊಡಗಿದರು. ಮಳೆರಾಯನ ಆರ್ಭಟಕ್ಕೆ ಬೆಚ್ಚದೆ ತಲೆಗೆ ಮುಂಡಾಸು, ಮುಟ್ಟಾಳೆ ಧರಿಸಿ, ನಾಟಿ ಕಾರ್ಯದ ಸಂಭ್ರಮ ಅನುಭವಿಸಿದರು.

ಜಾಹೀರಾತು

ಶಾಲಾ ಮುಖ್ಯಗುರು ಮರ್ಸಿನ್ ಮೇ ಪಾಯ್ಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಲಾಕ್ಷಿ, ಸದಸ್ಯರಾದ ಪೂರ್ಣಿಮಾ, ಗೀತಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೋಹನದಾಸ್ ಸಲಹೆ ಸಹಕಾರ ನೀಡಿದರು. ಲಿಂಗಮ್ಮ ಮತ್ತು ಮಕ್ಕಳು ನೀಡಿದ ಲಘು ಉಪಾಹಾರದೊಂದಿಗೆ ಹೊಸ ಅನುಭವಗಳನ್ನು ಪಡೆದ ಮಕ್ಕಳು, ಕೃಷಿ ಪಾಠದ ಕಾರ್ಯಾನುಭವ ಪಡೆದುಕೊಂಡರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ