ಬಂಟ್ವಾಳ

ಕೊನೆಗೂ ಪೂರ್ತಿ ಶಿಫ್ಟ್ ಆದ ಜನಸ್ನೇಹಿ ಕೇಂದ್ರ

ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರು ಹಳೇ ರಂಗಮಂದಿರ ಕಟ್ಟಡದಲ್ಲಿದ್ದ ಅಟಲ್ ಜನಸ್ನೇಹಿ ಕೇಂದ್ರ ಕೊನೆಗೂ ಮಿನಿ ವಿಧಾನಸೌಧದ ಒಳಗೆ ಶಿಫ್ಟ್ ಆಗಿದೆ.

ಜಾಹೀರಾತು

ಇಲ್ಲಿ ಪಹಣಿ ಭೂಮಿ ಅರ್ಜಿ, ಜಾತಿ ಆದಾಯ ಪಿಂಚಣಿ, ಆಧಾರ್ ಕಾರ್ಡ್ ಗಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನಾದುರಸ್ತಿಯಲ್ಲಿರುವ ಈ ಕಟ್ಟಡದಲ್ಲಿ ಕಾರ್ಯಾಚರಿಸಲು ಸಮಸ್ಯೆ ಎದುರಾಗಿತ್ತು. ಆಧಾರ್ ಕಾರ್ಡ್ ಗಾಗಿ ಇದೇ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಜನರು ನಿಲ್ಲುತ್ತಿದ್ದರು. ಕಳೆದ ವರ್ಷ ಅಕ್ಟೋಬರ್ 22ರಂದು ಮಿನಿ ವಿಧಾನಸೌಧ ಉದ್ಘಾಟನೆಗೊಂಡಿದ್ದರೂ ಅದರ ಎದುರು ಇದ್ದ ಈ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದ ಜನಸೌಲಭ್ಯದ ವ್ಯವಸ್ಥೆಗಳು ಸ್ಥಳಾಂತರಗೊಂಡಿರಲಿಲ್ಲ. ಇದಾದ ಮೇಲೆ ಚುನಾವಣೆಗಳು ಬಂದು ಹೋದವು. ಕೊನೆಗೂ ಮಿನಿ ವಿಧಾನಸೌಧಕ್ಕೆ ಇಲ್ಲಿನ ಕೆಲಸ ಕಾರ್ಯಗಳು ಸ್ಥಳಾಂತರಗೊಂಡಂತಾಗಿದೆ.

ಸುಮಾರು ಎಂಟು ತಿಂಗಳ ಬಳಿಕ ಮಿನಿ ವಿಧಾನಸೌಧದೊಳಗೆ ಪ್ರವೇಶ ದೊರಕಿರುವ ಈ ಸೌಕರ್ಯಗಳನ್ನು ನಿಜವಾದ ಅರ್ಥದಲ್ಲಿ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಶ್ರಮಿಸಬೇಕಿದೆ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ