ಸಿನಿಮಾ

ಜೆವಣ್ ಕೊಂಕಣಿ ಚಿತ್ರಕ್ಕೆ ಮುಹೂರ್ತ

ಶ್ರೀ ಮಹಾಮಾಯಿ ಸಿನಿ ಕ್ರಿಯೇಶನ್ಸ ರವರ ಎರಡನೇ ಕಲಾಕಾಣಿಕೆ, ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ  ಜೆವಣ್ ಎಂಬ ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರದ ಮುಹೂರ್ತ ಕಾರ್ಯಕ್ರಮವು ಶ್ರೀ.ತಿರುಮಲ‌ ವೆಂಕಟರಮಣ ದೇವಸ್ಥಾನ ಬಂಟ್ವಾಳದಲ್ಲಿ‌ ಬುಧವಾರ ನಡೆಯಿತು.

ಜಾಹೀರಾತು

ವೇದಮೂರ್ತಿ ವಸಂತ್ ಭಟ್ ಕ್ಲಾಪ್ ಮಾಡಿದರು. ದೇವಳದ ಮೊಕ್ತೇಸರರಾದ ಅರ್ಲ ಗೋವಿಂದ ಪ್ರಭು ಕ್ಯಾಮರಾ ಚಾಲನೆ ಮಾಡಿದರು. ವೇದಮೂರ್ತಿ ಸದಾಶಿವ ಭಟ್ ಮತ್ತು ವೇದಮೂರ್ತಿ‌ ಸದಾನಂದ ಭಟ್ ಶುಭಾಶೀರ್ವಾದಗೈದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ವಿಟ್ಲ ಮಂಗೇಶ್ ಭಟ್, ಡಾ. ಅಶೋಕ ಕಾಮತ್, ಎಂ.ಸುಬ್ರಮಣ್ಯ.ಪೈ, ಮಧುಕರ ಮಲ್ಯ, ಪ್ರಮೋದ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಜೆವಣ್  ಅಪ್ಪಟ ಸಾಂಸಾರಿಕ ಕಥೆಯೊಳಗೆ ಮಿಳಿತವಾಗಿರುವ ಭರಪೂರ ಹಾಸ್ಯದ ಅಪರೂಪದ ಚಿತ್ರ. ಈ ಹಿಂದೆ ಅಂತು ಹೆಸರಿನ ವಿಭಿನ್ನ ಕೊಂಕಣಿ ಚಿತ್ರ ಮಾಡಿದ್ದ ಕರೋಪಾಡಿ ಅಕ್ಷಯ್ ನಾಯಕ್ ರವರು ತನ್ನ ಎರಡನೇ ಚಿತ್ರಕ್ಕೆ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಅಂತುವಿಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗವೆ ಈ ಚಿತ್ರಕ್ಕೂ ಇರಲಿದೆ.‌‌ ‌ಕಾಲೇಜ್ ಮುಗಿದರೂ ಕೆಲಸ ಸಿಗದೆ ಮನೆಯವರಿಗೆ ಭಾರವಾಗಿರುವ ಯುವ ಪೀಳಿಗೆಯ ಕಥೆಯನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ