ಕಲ್ಲಡ್ಕ

ಕೋಮು ಸೌಹಾರ್ದ ಸಾರುವ “ಮ್ಯಾರಥಾನ್ ಓಟ”


ಪಾಟ್ರಕೋಡಿ ಇಂಡಿಯನ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪಾಟ್ರಕೋಡಿ ಹಳೆ ವಿದ್ಯಾರ್ಥಿ ಸಂಘ ಇದರ ಜಂಟಿ ಆಶ್ರಯದಲ್ಲಿ ಗಣರಾಜೋತ್ಸವದ ಅಂಗವಾಗಿ “ಆರೋಗ್ಯಕ್ಕಾಗಿ ಓಟ” ಎಂಬ ಧ್ಯೇಯ ವಾಕ್ಯದೊಂದಿಗೆ ಕೋಮು ಸೌಹಾರ್ದ ಸಾರುವ “ಮ್ಯಾರಥಾನ್ ಓಟ” ಶುಕ್ರವಾರ ಬೆಳಿಗ್ಗೆ ಕೊಡಾಜೆ ಜಂಕ್ಷನ್‌ನಿಂದ ಪಾಟ್ರಕೋಡಿಯವರೆಗೆ ನಡೆಯಿತು.


ಕೆದಿಲ ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಶೆಟ್ಟಿ ಕಲ್ಲಾಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ತಾಪಂ ಸದಸ್ಯ ಹಾಜಿ ಆದಂ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಕೆದಿಲ ಗ್ರಾಪಂ ಮಾಜಿ ಸದಸ್ಯರಾದ ರಾಬರ್ಟ್ ಲಸ್ರಾದೋ, ಹಮೀದ್ ಮೆಜಸ್ಟಿಕ್, ಸದಸ್ಯರಾದ ಸುದರ್ಶನ್ ಕುದುಂಬ್ಲಾಡಿ, ಉಮೇಶ್ ಮುರುವ, ನೆಟ್ಲಮುಡ್ನೂರು ಗ್ರಾಪಂ ಸದಸ್ಯ ಲತೀಫ್ ನೇರಳಕಟ್ಟೆ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪರಮೇಶ್ವರ ನಾವಡ ಭಟ್, ಕೆದಿಲ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರವೀನ್ ರೈ ಕಲ್ಲಾಜೆ, ಅಹ್ಮದ್ ಮಾಸ್ಟರ್ ಪಾಟ್ರಕೋಡಿ, ಶಾಲಾ ಮುಖ್ಯೋಪಾಧ್ಯಾಯ ಉಮ್ಮರಗಿ ಶರಣಪ್ಪ, ಹರೀಶ್ ಕುದುಂಬ್ಲಾಡಿ, ಕೆ.ಪಿ.ಮುಹಮ್ಮದ್ ಪಾಟ್ರಕೋಡಿ, ಇಬ್ರಾಹಿಂ ಬಾತಿಶ್, ಪಾಟ್ರಕೋಡಿ ಇಂಡಿಯನ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸಿರಾಜ್ ಕೆತ್ತೆಪುಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಝಾಮ್ ಬಿ.ಎಚ್., ಕೆ. ಖಾಸಿಂ ಪಾಟ್ರಕೋಡಿ, ತಾಜುದ್ದೀನ್ ಬಯಬೆ, ಅಝೀಂ ಪಾಟ್ರಕೋಡಿ, ಲತೀಫ್ ಕೋಡಿ, ನೌಶಾದ್ ಕೋಡಿ, ಕಲಂದರ್ ಶಾಫಿ ಪಾಟ್ರಕೋಡಿ ಮತ್ತಿತರರು ಉಪಸ್ಥಿತರಿದ್ದರು. ಎಸ್‌ಡಿಎಂ-ಸಿ ಅಧ್ಯಕ್ಷ ಕೆ.ಎಸ್. ಶರೀಫ್ ಸ್ವಾಗತಿಸಿ, ಉನೈಸ್ ಪಾಟ್ರಕೋಡಿ ವಂದಿಸಿದರು. ನಿಶಾದ್ ಪಾಟ್ರಕೋಡಿ ನಿರೂಪಿಸಿದರು.

ಫಲಿತಾಂಶ:
೧೮-೩೫ರ ವಿಭಾಗ: ಬಿ.ಎಂ.ಕೆ ಅಝೀಝ್ ಬಯಬೆ ಪ್ರಥಮ, ಅಲಿ ಹೈದರ್ ಪಾಟ್ರಕೋಟಿ ದ್ವಿತೀಯ, ನಿಝಾಮ್ ಕೋಡಿ ತೃತೀಯ.
ಹಿರಿಯ ವಿಭಾಗ: ಹಮೀದ್ ಬಸೋಟು ಪ್ರಥಮ, ಉಸ್ಮಾನ್ ಮೆಹಬೂಬ್ ದ್ವಿತೀಯ, ಸಾಜಿದ್ ಮಿತ್ತಪಡ್ಪು ತೃತೀಯ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ