ಸಿನಿಮಾ

ಮಿತ್ರತ್ವ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ಜಾಹೀರಾತು

ಬಂಟ್ವಾಳ ಕೂಟ ಯುವ ಜಗತ್ತು ಸಹಯೋಗದೊಂದಿಗೆ ಅಲೆತ್ತೂರು ಕ್ರಿಯೇನ್ಸ್ ಬಿ.ಸಿ.ರೋಡ್ ನಿರ್ಮಾಣದ ಮಿತ್ರತ್ವ ಎಂಬ ಕನ್ನಡ ಕಿರುಚಿತ್ರದ ಧ್ವನಿಸುರುಳಿ, ಪ್ರಥಮ ಟ್ರೈಲರ್ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ತಂಡದ ಕಿಶನ್ ಹೊಳ್ಳ ನೂಜಿಪ್ಪಡಿ ಸ್ವಾಗತಿಸಿದರು. ನಿರ್ದೇಶಕ, ಚಲನಚಿತ್ರ – ರಂಗಭೂಮಿ ನಟ ರಾಘವೇಂದ್ರ ಕಾರಂತ ಮೊಗರ್ನಾಡು ಚಿತ್ರದ ಸಂಕ್ತಿಪ್ತ ಮಾಹಿತಿ ನೀಡಿದರು.

ಡಿಸೆಂಬರ್ 23 ರಂದು ನಡೆಯುವ ೧೦ನೇ ವರ್ಷದ ಅಲೆತ್ತೂರು ಹಬ್ಬದ ಸಮಾರಂಭದಲ್ಲಿ ಚಿತ್ರ ಬಿಡುಗಡೆ ನಡೆಯಲಿದೆ. ಚಿತ್ರದ ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ ಮತ್ತು ನಿರ್ದೇಶನವನ್ನು ರಾಘವೇಂದ್ರ ಕಾರಂತ ಮೊಗರ್ನಾಡು ಮಾಡಿದ್ದಾರೆ. ಮಯ್ಯ ಬ್ರದರ್‍ಸ್ ಅಲೆತ್ತೂರು ಚಿತ್ರದ ನಿರ್ಮಾಪಕರು. ಕಿಶನ್ ಹೊಳ್ಳ ನೂಜಿಪ್ಪಾಡಿ ಮತ್ತು ಬಳಗ ಕ್ಯಾಮರಾ ಕೆಲಸವನ್ನು ಮಾಡಿದ್ದು, ಸಂದೇಶ ಬಿ.ಅಲೆತ್ತೂರು ಮತ್ತು ಬಳಗ ಸಂಕಲನ, ಶರತ್ ಮಯ್ಯ ಅಲೆತ್ತೂರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಹಕರಿಸಿದ್ದಾರೆ. ಚಿತ್ರಕ್ಕೆ ಸಂಗೀವವನ್ನು ಶ್ರೀನಿಧಿ ಭಟ್ ಟಿ.ಎನ್ ಮತ್ತು ವರುಣ್ ರಾವ್ ನೀಡಿದ್ದಾರೆ.

VIDEO LINK:

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ