ಕಲ್ಲಡ್ಕ

ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಚಂಡಿಕಾಹವನ, ಕುಂಕುಮಾರ್ಚನೆ

ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಬುಧವಾರ ಶ್ರೀ ಮಹಾ ಗಣಪತಿ ಹವನ ಪೂರ್ವಕ ಸಗ್ರಹಮಖ ಶ್ರೀ ಚಂಡಿಕಾ ಹವನ ನಡೆಯಿತು. ಸಕಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಲ್ಗೊಂಡು ಶ್ರೀಗುರು, ಶ್ರೀ ಶಕ್ತಿ ಕೃಪೆಗೆ ಪಾತ್ರರಾದರು.

ಜಾಹೀರಾತು

ಬೆಳಗ್ಗೆ ಪುಣ್ಯಾಹ ವಾಚನ, ಕಲಶ ಪ್ರತಿಷ್ಠೆ ಬಳಿಕ ಶ್ರೀ ಚಂಡಿಕಾ ಹವನ ಆರಂಭಗೊಂಡಿತು. ಮಾತೃ ವಿಭಾಗದಿಂದ ಕುಂಕುಮಾರ್ಚನೆ. ಅಲ್ಲದೇ ಸುವಾಸಿನೀ ಪೂಜೆ, ದಂಪತಿ ವಾಯನದಾನ, ಕುಮಾರಿಕಾ ಪೂಜೆ ನೆರವೇರಿತು.

ಇದೇ ಸಂದರ್ಭ ರುದ್ರ ಜಪ, ಏಕಾದಶ ರುದ್ರಾಭಿಷೇಕ ನಡೆಯಿತು. ಗೋ ಸಂಜೀವಿನಿ ಕಾರ್ಯಕ್ರಮದಲ್ಲಿ ಮುಳ್ಳುಂಜ ವೆಂಕಟೇಶ್ವರ ಭಟ್ ಅವರು ಮಾಹಿತಿ ನೀಡಿದರು. ವೇಮೂ ಮುಕುಂದ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಮಧ್ಯಾಹ್ನ ಮಹಾ ಮಂಗಳಾರತಿ,  ಪ್ರಸಾದ ವಿತರಿಸಲಾಯಿತು. ಮಂಗಳೂರು ಮಂಡಲದ ವೈದಿಕ ವಿಭಾಗ ಪ್ರಧಾನ ಅಮೈ ಶಿವಪ್ರಸಾದ ಭಟ್ ನೇತೃತ್ವ ವಹಿಸಿದ್ದರು. ಮಹಾಮಂಡಲ ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಭಟ್, ಮಂಗಳೂರು ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಮತ್ತು ಪದಾಧಿಕಾರಿಗಳು, ಪ್ರದಾನ ಗುರಿಕ್ಕಾರ ಉದಯ ಕುಮಾರ ಖಂಡಿಗ, ಉಮಾಶಿವ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಮತ್ತು ಸದಸ್ಯರು, ಕಲ್ಲಡ್ಕ ವಲಯದ ಅಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ಮತ್ತು ಪದಾಧಿಕಾರಿಗಳು, ವಿಟ್ಲ, ಕೇಪು ವಲಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ