ವಿಟ್ಲ

ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರಕ್ಕೆ ನೆರವು

ಅತ್ಯಂತ ಗ್ರಾಮೀಣ ಭಾಗದವಾದ ಪುಣಚ ಭಾಗದಲ್ಲಿನ ಬಡ ಮಕ್ಕಳೇ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಶಾಲೆಗೆ ವೈಯಕ್ತಿಕ ಹಗೆತನವನ್ನಿಟ್ಟುಕೊಂಡು ಶಾಲಾ ಮಕ್ಕಳ ಊಟಕ್ಕೆ ಕೊಲ್ಲೂರಿನಿಂದ ಬರುತ್ತಿದ್ದ ಅನುದಾನವನ್ನು ಸ್ಥಗಿತಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹರಿಪ್ರಸಾದ್ ಯಾದವ್ ಹೇಳಿದರು.

ಜಾಹೀರಾತು

ಬುಧವಾರ ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಅಡ್ಯನಡ್ಕ ಬ್ರಿಗೇಡ್ ಬ್ರದರ್‍ಸ್ ಸದಸ್ಯರು ಒಟ್ಟಾಗಿಸಿದ ಅಕ್ಕಿಯನ್ನು ಹಸ್ತಾಂತರಿಸಿ ಮಾತನಾಡಿದರು.

ಯುವಕರು, ಉದ್ಯಮಿಗಳು, ಧಾರ್ಮಿಕ ಕೇಂದ್ರದ ಹಿರಿಯರು ಒಟ್ಟಾಗಿ ಸೇರಿಕೊಂಡು ಸುಮಾರು 3 ಕ್ವಿಂಟಾಲ್ 60 ಕೆಜಿ ಅಕ್ಕಿಯನ್ನು ದೇವಿನಗರ ಶಾಲೆಗೆ ಕೊಡುತ್ತಿದ್ದೇವೆ ಎಂದು ಹೇಳಿದರು.

ಶ್ರೀದೇವಿ ವಿದ್ಯಾಕೇಂದ್ರದ ಸಂಚಾಲಕ ಜಯಶ್ಯಾಮ ನೀರ್ಕಜೆ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದ ಅನುದಾನ ಈವರೆಗೆ ಸಿಕ್ಕಿಲ್ಲ ಎಂದು ತಿಳಿಸಿದರು.

ಪುಣಚ ಪ್ರಾಥಮಿಕ ವ್ಯವಸಾಯ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ, ಶಾಲಾ ಆಡಳಿತ ಮಂಡಳಿಯ ಶಂಕರನಾರಾಯಣ ಮಲ್ಯ, ಸುಬ್ಬ ನಾಯ್ಕ, ಉದ್ಯಮಿ ರವಿಪ್ರಸಾದ್, ಕಾರ್ತಿಕ ರೈ, ದಯಾನಂದ, ಗಣೇಶ್, ಜಯೇಶ್ ಹಾಗೂ ಬ್ರಿಗೇಡ್ ಬ್ರದರ್‍ಸ್ ಸದಸ್ಯರು ಹಾಜರಿದ್ದರು. ಹಿರಿಯ ಶಿಕ್ಷಕಿ ಗಂಗಮ್ಮ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲೋಕೇಶ್ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.