ಗೃಹಬಳಕೆಯ ಗ್ಯಾಸ್ ವಿತರಣೆಯಲ್ಲಿ ಸಮಸ್ಯೆಗಳು ಇರುವ ಕುರಿತು ಸುದ್ದಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಭದ್ರಾ ಏಜನ್ಸೀಸ್ ನ ಭಾರತ್ ಗ್ಯಾಸ್ ವಿತರಕರಾದ ಮಂಜುನಾಥ ಆಚಾರ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.
ವದಂತಿಗಳಿಗೆ ಗ್ರಾಹಕರು ತಲೆಕೆಡಿಸಿಕೊಳ್ಳುವುದು, ಭೀತಿಪಡುವುದು ಅಗತ್ಯವಿಲ್ಲ. ಎಂದಿನಂತೆ ಸಮಯಕ್ಕೆ ತಲುಪಿಸಲಾಗುತ್ತದೆ ಮನೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಸಾಮಾನ್ಯವಾಗಿದೆ. ನಿಮಗೆ ಅಗತ್ಯವಿರುವಾಗ ಮಾತ್ರ ಬುಕ್ ಮಾಡಿ, ಮತ್ತು ಗ್ಯಾಸ್ ಸಿಲಿಂಡರ್ ನಿಮಗೆ ಸಮಯಕ್ಕೆ ತಲುಪುತ್ತದೆ ಎಂದರು.