• ಡಾ. ಎ.ಜಿ.ರವಿಶಂಕರ್

  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಪಚ್ಚೆ ಹೆಸರನ್ನು ಬೇಯಿಸಿ ತಿನ್ನುವುದು ಅಥವಾ ಹೆಸರು ಬೇಳೆಯ ಪಾಯಸ ಎಂದರೆ ಕೆಲವರಿಗೆ ಬಹು ಇಷ್ಟವಾದ ವಿಷಯ.ಇದು ಆಬಾಲ ವೃದ್ಧರಿಗೆ ಪುಷ್ಟಿದಾಯಕವೂ ಸತ್ವಪೂರಕವೂ ಆಗಿದೆ.

ಜಾಹೀರಾತು
  1. ಹೆಸರಿನ ಪುಡಿಯನ್ನು ನೀರಿನಲ್ಲಿ ಕಲಸಿ ತಲೆಗೆ ಹಚ್ಚುವುದರಿಂದ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
  2. ಹೆಸರಿನ ಹುಡಿಗೆ ಸ್ವಲ್ಪ ಅರಸಿನ ಪುಡಿ ಸೇರಿಸಿ ಜೇನುತುಪ್ಪದಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ  ಮೊಡವೆ ಕಡಿಮೆಯಾಗುತ್ತದೆ ಮತ್ತು ಮುಖದ ಕಾಂತಿ ಅಧಿಕವಾಗುತ್ತದೆ.
  3. ಚಿಕ್ಕ ಮಕ್ಕಳಿಗೆ ಹೆಸರಿನ ಗಂಜಿ ಕೊಡುವುದರಿಂದ ಶರೀರದಲ್ಲಿ ಮಾಂಸ ತುಂಬಿಕೊಳ್ಳುತ್ತದೆ ಮತ್ತು ಸತ್ವಗಳ ಕೊರತೆಯಿಂದ ಕಂಡುಬರುವ ಗುದ ಭ್ರಂಶವು (rectal prolapse ) ವಾಸಿಯಾಗುತ್ತದೆ.
  4. ಹೆಸರಿನ ಪುಡಿಯನ್ನು ನೀರಿನಲ್ಲಿ ಕಲಸಿ ತೆಳ್ಳಗಿನ ಬಟ್ಟೆಗೆ ಸವರಿ ಗುದದ್ವಾರಕ್ಕೆ ಬಿಗಿಯಾಗಿ ಕಟ್ಟುವುದರಿಂದ ಗುದ ಭ್ರಂಶವು ಕಡಿಮೆಯಾಗುತ್ತದೆ.
  5. ಹೆಸರನ್ನು ಬೇಯಿಸಿ ಬಟ್ಟೆಯಲ್ಲಿ ಕಟ್ಟಿ ಶೇಕ ಕೊಡುವುದರಿಂದ ಉರಿ ಹಾಗು ನೋವಿನಿಂದ ಕೂಡಿದ ಹುಣ್ಣುಗಳು ಬೇಗನೆ ವಾಸಿಯಾಗಲು ಸಹಕರಿಸುತ್ತದೆ.
  6. ಹೆಸರಿನ ಪುಡಿಯನ್ನು ನೀರಿನಲ್ಲಿ ಕಲಸಿ ಕಣ್ಣಿನ ರೆಪ್ಪೆಯ ಮೇಲೆ ಹಚ್ಚುವುದರಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯ ಅಧಿಕವಾಗುತ್ತದೆ.
  7. ಹೆಸರನ್ನು ಬೇಯಿಸಿ ತೆಗೆದ ನೀರನ್ನು ಸರ್ಪಸುತ್ತಿನ ಮೇಲೆ (herpis ) ಸುರಿಯುವುದರಿಂದ ಉರಿ ಹಾಗು ನೋವು ಕಡಿಮೆಯಾಗುತ್ತದೆ.
  8. ಹೆಸರನ್ನು ತುಪ್ಪದಲ್ಲಿ ಬೇಯಿಸಿ ನಂತರ ಆ ತುಪ್ಪವನ್ನು ಹಲ್ಲು ಹಾಗು ವಸಡುಗಳಿಗೆ ಹಚ್ಚಿದರೆ ಹಲ್ಲುಗಳು ದೃಢವಾಗುತ್ತವೆ ಮತ್ತು ದಂತ ರೋಗಗಳು ಕಡಿಮೆಯಾಗುತ್ತವೆ.
  9. ಹೆಸರನ್ನು ನೀರಿನಲ್ಲಿ ಹಿಂದಿನ ರಾತ್ರಿ ನೆನೆಹಾಕಿ ಮರುದಿವಸ ಆ ನೀರನ್ನು ಕುಡಿಯುವುದರಿಂದ ಅತಿಯಾದ ಬಾಯಾರಿಕೆ ,ವಾಂತಿ ಮತ್ತು ಮೂಗು, ವಸಡು  ಇತ್ಯಾದಿಗಳಿಂದ ರಕ್ತ ಬರುವುದು ಕಡಿಮೆಯಾಗುತ್ತದೆ.
  10. ಹೆಸರನ್ನು ಮೊಳಕೆಬರಿಸಿ ತಿನ್ನುವುದರಿಂದ ಮಧುಮೇಹದ ಹಾಗು ಕುಷ್ಟ ರೋಗಿಗಳ ತೂಕ ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ನಿತ್ರಾಣ ಕಡಿಮೆಯಾಗುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.