ಬಂಟ್ವಾಳ

ಕೊನೆಗೂ ಸರ್ವೀಸ್ ರಸ್ತೆ ಕಡೆ ದೃಷ್ಟಿ ಬಿತ್ತು!

ರಸ್ತೆ ರಿಪೇರಿಗೆ ಹೊಣೆಗಾರರು ಯಾರು ಎಂಬ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡಿ ಕಾಲಹರಣ ಮಾಡುತ್ತಿದ್ದ ರಾಜಕೀಯ ಪಕ್ಷಗಳು ತಮ್ಮ ಗಮನವನ್ನು ಬೇರೆ ವಿಚಾರದತ್ತ ಕೇಂದ್ರೀಕರಿಸಿವೆ. ಆದರೂ ಬಿ.ಸಿ.ರೋಡ್ ಸರ್ವೀಸ್ ರಸ್ತೆ ಹೊಂಡ ಮುಚ್ಚಲಾಗುತ್ತಿದೆ. ಇದಕ್ಕೇನು ಕಾರಣ ಅಂದಿರಾ?

ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಬಿ.ಸಿ.ರೋಡಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪುರಸಭೆಯೇ ಖುದ್ದು ಮುಂದಾಗಿ ಸರ್ವೀಸ್ ರಸ್ತೆ ಗುಂಡಿ ಮುಚ್ಚಿಸಿತು.

ಜಾಹೀರಾತು

ಚಿತ್ರಗಳು: ಕಿಶೋರ್ ಬಿ.ಸಿ.ರೋಡ್

ಜಾಹೀರಾತು

ಜಾಹೀರಾತು

ಎನ್.ಎಚ್.ಎ.ಐ. ಗೆ ಸಂಬಂಧಿಸಿದ ಈ ರಸ್ತೆ ರಿಪೇರಿಗೆ ಅದಕ್ಕೆ ನೇರ ಸಂಬಂಧಿಸಿದ ಜನಪ್ರತಿನಿಧಿ ಮಾಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದು ನಮಗೆ ಸಂಬಂಧಿಸಿದ್ದಲ್ಲ ಎಂದು ಪುರಸಭೆಯೂ ಹೇಳಿತ್ತು. ಈ ಕುರಿತು ಆರೋಪ, ಪ್ರತ್ಯಾರೋಪಗಳು, ರಾಜಕೀಯ ಕೆಸರೆರಚಾಟ ನಡೆದವೇ ವಿನ: ಸ್ಥಳೀಯ ಆಟೋ ಚಾಲಕರು, ಸಾರ್ವಜನಿಕರು ಚಂದಾ ಎತ್ತುವ ಮೂಲಕ ಹೊಂಡ ಮುಚ್ಚಲು ಪ್ರಯತ್ನ ನಡೆಸಿದರು. ಇದೀಗ ಮತ್ತೆ ಹೊಂಡ ಮುಚ್ಚುವ ಕೆಲಸ ನಡೆಯಿತು. ಹೆಚ್ಚು ಸಮಯ ಇದು ಬಾಳಿಕೆ ಬರುವುದಿಲ್ಲ ಎಂಬ ಸಾರ್ವಜನಿಕರ ಅಭಿಪ್ರಾಯದ ನಡುವೆಯೂ ಇಷ್ಟಾದರೂ ಆಯಿತಲ್ಲ ಎಂಬ ಮಾತು ಕೇಳಿಬಂತು.

ಚಿತ್ರಗಳು ಮತ್ತು ವಿಡಿಯೋ: ಕಿಶೋರ್ ಪೆರಾಜೆ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ