ಫರಂಗಿಪೇಟೆ

ಮುಸ್ಲಿಮರು ಒಂದಾಗಿ ಹೋರಾಡಲು ಕರೆ

ಸಂವಿದಾನವನ್ನು ಬಿಗಿದಪ್ಪಿಕೊಂಡು ಒಟ್ಟಾಗಿ ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೊರಾಟ ನಡೆಸಲು ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅಲ್-ಖಝಾನ ಸಬಾಂಗಣದಲ್ಲಿ ಗೆಟು ಗೆದರ್(ಸ್ನೇಹಕೂಟ) ಕಾರ್ಯಕ್ರಮದಲ್ಲಿ ಪ್ರಸಕ್ತ ವಿದ್ಯಾಮನಗಳು ಅದರ ಅಪಾಯದ ಬಗ್ಗೆ ಜಾಗ್ರತಿ ಮೂಡಿಸಿ ಮಾತನಾಡಿದರು .

ಜಾಹೀರಾತು

ದೇಶದಲ್ಲಿ ಧರ್ಮಾಧಾರಿತ ಧ್ರುವೀಕರಣ ನಡೆಯುತ್ತಿದ್ದು, ಮಾಂಸದ ಹೆಸರಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿದೆ. ತಿನ್ನುವ ಆಹಾರಕ್ಕೆ ನಿರ್ಬಂದ ಹೇರಲಾಗುತ್ತಿದ್ದು, ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ. ಅನ್ಯಾಯ, ಅಸಹಿಷ್ಣುತೆ ಪ್ರಶ್ನಿಸಿದವರನ್ನು ದಮನಿಸಲಾಗುತ್ತಿದ್ದು, ಮುಸ್ಲಿಂ ದ್ವೇಷಕ್ಕೆ ಮಾನ್ಯತೆ ಲಭಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜಾಹೀರಾತು

ಪಿ.ಎಫ್.ಐ ಬಂಟ್ವಾಳ ತಾಲೂಕು ಅದ್ಯಕ್ಷ ಇಜಾಝ್ ಅಹಮದ್ ಬಂಟ್ವಾಳ ಕಾರ್ಯಕ್ರಮದ ಅದ್ಯಕ್ಷ ವಹಿಸಿ ಮೇ 2 ಕ್ಕೆ ಮಂಗಳೂರಿನಲ್ಲಿ ನಡೆಯುವ ಮಂಗಳುರು ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು, ಅರಫ ಗ್ರೂಪ್ ಮುಖ್ಯಸ್ಥರಾದ ಸಾವುಞಿ, ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಸಿದ್ದೀಖ್ ಜಿಎಸ್ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಪಿ.ಎಫ್.ಐ ಬಂಟ್ವಾಳ ತಲೂಕು ಸಮಿತಿ ಕಾರ್ಯದರ್ಶಿ ಸೆಲೀಮ್ ಕೆ ಉಪಸ್ಥಿತರಿದ್ದರು, ಬಂಟ್ವಾಳ ತಾಲೂಕಿನ ಮಸೀದಿ ಜಮಾತಿನ ಅದ್ಯಕ್ಷರು ಪದಾದಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಬಾಗವಹಿಸಿದ್ದರು ಪಿ.ಎಫ್.ಐ ಬಿಸಿರೋಡ್ ವಲಯಾದ್ಯಕ್ಷ ಇಮ್ತಿಯಾಝ್ ತುಂಬೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ರಹಿಮಾನ್ ಮಠ ನಿರೂಪಿಸಿ ವಂದಿಸಿದರು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts