ಬಂಟ್ವಾಳ

ಉಗ್ಗೆದಲ್ತಾಯ, ಪಂಜುರ್ಲಿ ದೈವ ಕ್ಷೇತ್ರದಲ್ಲಿ ದೊಂಪದ ಬಲಿ ಉತ್ಸವ

ಕುರಿಯಾಳ ಗ್ರಾಮದ ಶ್ರೀ ಉಗ್ಗೆದಲ್ತಾಯ ದೈವ ಮತ್ತು ಪಂಜುರ್ಲಿ ದೈವಸ್ಥಾನ ದೊಂಪದ ಬಲಿ ಕ್ಷೇತ್ರದಲ್ಲಿ ನೂತನ ದೊಂಪದ ಬಲಿ ಕ್ಷೇತ್ರದ ಶುದ್ಧೀಕರಣ ಮತ್ತು ಕಲಶೋತ್ಸವ ಪೂಜೆ ಮತ್ತು ದೊಂಪದ ಬಲಿ ಉತ್ಸವ ಫೆ.10ರಿಂದ ಫೆ.12ವರೆಗೆ ನಡೆಯಲಿದೆ.

ಈ ಪ್ರಯುಕ್ತ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, 10ರಂದು ಸಂಜೆ 5ರಿಂದ ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ, ಸಪ್ತಸಿದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ವನದುರ್ಗಾ ಪೂಜೆ ನಡೆಯುವುದು. 11ರಂದು ಶನಿವಾರ ಬೆಳಗ್ಗೆ 5ಕ್ಕೆ ಕೂರಿಯಾಳಗುತ್ತಿನಿಂದ ಶ್ರೀ ಉಗ್ಗೆದಲ್ತಾಯ ದೈವದ ಮತ್ತು ನಡುಬಾಳಿಕೆಯಿಂದ ಪಂಜುರ್ಲಿ ದೈವದ ಭಂಡಾರ ಹೊರಡುವುದು.

ಬೆಳಗ್ಗೆ 9ರಿಂದ ಪಂಚವಿಂಶತಿಕಲಶ, ಪ್ರಧಾನ ಹೋಮ, ಶಾಂತಿದುರ್ಗಾ ಹೋಮ, ಗಣಹೋಮ, ಕಲಶಾಭಿಶೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ ಉಗ್ಗೆದಲ್ತಾಯ ದೈವದ ನೇಮೋತ್ಸವ, 12ರಂದು ಭಾನುವಾರ ರಾತ್ರಿ ಉಗ್ಗೆದಲ್ತಾಯ ಮತ್ತು ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಮುಖರಾದ ಸೀತಾರಾಮ ಸಾಮಾನಿ, ಗಣನಾಥ ಶೆಟ್ಟಿ ಪೂಕರೆಮಾರು, ಅನೂಪ್ ಆರ್. ಶೆಟ್ಟಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ