ಬಂಟ್ವಾಳ

ವಿವಿಧೆಡೆ ಗಣರಾಜ್ಯೋತ್ಸವ

 

ಪಾಂಡವರಕಲ್ಲು ಜುಮಾ ಮಸೀದಿ

ಜಾಹೀರಾತು

ಪಾಂಡವರಕಲ್ಲು ಬದ್ರಿಯಾ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದರಸದ ಜಂಟಿ ಆಶ್ರಯದಲ್ಲಿ ಗುರುವಾರ ಬೆಳಗ್ಗೆ ಮದರಸಾ ಸಭಾಂಗಣದಲ್ಲಿ ೬೮ನೆ ಗಣರಾಜ್ಯೋತ್ಸವವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷ ಕೆ.ಜಿ.ಎನ್.ಪುತ್ತುಮೋನು ಧ್ವಜಾರೋಹಣಗೈದು ಮಾತನಾಡಿದರು. ಖತೀಬ್ ಅಬ್ದುಲ್ ಖಾದರ್ ದಾರಿಮಿ ದುಅ ಆರ್ಶೀರ್ವಚನಗೈದರು. ಪ್ರಧಾನ ಕಾರ್ಯದರ್ಶಿ ಕೆ.ಪಿ.ಉಮರ್ ಮುಸ್ಲಿಯಾರ್ ಮತ್ತು ಸದರ್ ಮುಅಲ್ಲಿಮ್ ಜಿ.ವೈ.ಅಬ್ದುಲ್ ರಝಾಕ್ ಮೌಲವಿ ಗೇರುಕಟ್ಟೆ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಬದ್ರು ಮೌಲವಿ, ಮುಹಮ್ಮದ್ ಮೌಲವಿ ನಾಳೆ, ಲತೀಫ್, ಫಾರೂಕ್, ಅಬ್ದುಲ್ ಖಾದರ್ ಸಹಿತ ಮದರಸ ವಿದ್ಯಾರ್ಥಿಗಳು ಸ್ಥಳೀಯರು ಉಪಸ್ಥಿತರಿದ್ದರು. ಮದರಸಾ ವಿದ್ಯಾರ್ಥಿ ಹಫೀಝ್ ಪ್ರತಿಜ್ಞೆ ಬೋಧಿಸಿದರು.

ಗುಡ್ಡೆ ಅಂಗಡಿ ಶಾಲೆ

ಜಾಹೀರಾತು

ಗುಡ್ಡೆಅಂಗಡಿ ಕಿರಿಯ ಪ್ರಾಥಾಮಿಕ ಶಾಲೆಯಲ್ಲಿ ಗುರುವಾರ ೬೮ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಬಂಟ್ವಾಳ ಪುರಸಭಾ ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆ ಅಂಗಡಿ ಧ್ವಜಾರೋಹಣಗೈದು ಮಾತನಾಡಿದರು. ಈ ಸಂದರ್ಭದಲ್ಲಿ ಎನ್.ಜೆ.ಎಂ. ಉಪಾಧ್ಯಕ್ಷ ಅಬ್ದುಲ್ ಹಮೀದ್, ನಿಸಾರ್ ಅಹ್ಮದ್ ಎಂಜಿನಿಯರ್, ಶಾಲಾ ಮುಖ್ಯೋಪಾಧ್ಯಯ ವೆಂಟಕರಾವ್, ಸಹ ಶಿಕ್ಷಕಿಯರಾದ ಗಿರಿಜಲಕ್ಷ್ಮಿ. ಸಾಬಿರಾ, ಪ್ರಮುಖರಾದ ಬಶೀರ್ ಗುಡ್ಡೆಅಂಗಡಿ, ಇರ್ಷಾದ್ ಗುಡ್ಡೆಅಂಗಡಿ ಸೇರಿದಂತೆ ಶಾಲಾ ಮಕ್ಕಳು, ಸ್ಥಳೀಯರು ಉಪಸ್ಥಿತರಿದ್ದರು

ಗುಡ್ಡೆಅಂಗಡಿ ಜುಮಾ ಮಸೀದಿ

ಜಾಹೀರಾತು

ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ಗುರುವಾರ ೬೮ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಮಸೀದಿಯ ಖತೀಬ್ ಸಿ.ಎಚ್.ಮುಹಮ್ಮದ್ ಲತೀಫಿ ಧ್ವಜಾರೋಹಣಗೈದು ಮಾತನಾಡಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಫಕೀರ್ ಅಹ್ಮದ್, ಉಪಾಧ್ಯಕ್ಷ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ಉಮರುಲ್ ಫಾರೂಕ್, ಕೋಶಾಧಿಕಾರಿ ಎಸ್.ಮುಹಮ್ಮದ್, ಸದಸ್ಯರಾದ ಮಜೀದ್ ಬೋಗೋಡಿ, ಸದರ್ ಹುಸೈನ್ ದಾರಿಮಿ, ಅಬೂಬಕ್ಕರ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಶರೀಫ್ ಬೋಗೋಡಿ ಸಹಿತ ಮದರಸ ವಿದ್ಯಾರ್ಥಿಗಳು, ಸ್ಥಳೀಯರು ಉಪಸ್ಥಿತರಿದ್ದರು.

ಕೊಳಕೆ ಸರಕಾರಿ ಶಾಲೆ

ಜಾಹೀರಾತು

ಕೊಳಕೆ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಗಣರಾಜ್ತೋತ್ಸವವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ಅಬ್ದುಲ್ಲಾ ಕೊಳಕೆ ಧ್ವಜಾರೋಹಣಗೈದು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಯ ಗೋಪಾಲ ಸಪಲ್ಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್, ಕೆ.ಎಸ್.ಮುಹಮ್ಮದ್, ರಿಯಾಝ್, ಶಿಕ್ಷಕಿಯರಾದ ದೇವಿಕಾ, ಚಂದ್ರಕಾ ಸಹಿತ ಶಾಲಾ ವಿದ್ಯಾರ್ಥಿಗಳು, ಸ್ಥಳೀಯರು ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಕಿ ಪೂರ್ಣಿಮಾ ವಂದಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ