ವಿಟ್ಲ

ಮಿತ್ತೂರು ಮಸೀದಿ ಸ್ವರ್ಣಮಹೋತ್ಸವ, ಸ್ವಲಾತ್ ವಾರ್ಷಿಕ ಅನುಸ್ಮರಣೆ

ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಇದರ ಸ್ವರ್ಣ ಹಬ್ಬ(50 ವರ್ಷ) ಮಹೋತ್ಸವ ಹಾಗೂ ಸಿರಾಜುಲ್ ಹುದಾ ಮದ್ರಸ ಮಿತ್ತೂರು ಇದರ 40ನೇ ವಾರ್ಷಿಕ ಹಾಗೂ 20ನೇ ಸ್ವಲಾತ್ ವಾರ್ಷಿಕ ಅನುಸ್ಮರಣಾ ಕಾರ್ಯಕ್ರಮ ಜನವರಿ 20 ಮತ್ತು 21 ರಂದು ನಡೆಯಲಿದೆ ಎಂದು ಸಿರಾಜುಲ್ ಹುದಾ ಮಸೀದಿಯ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಖಂದಕ್ ತಿಳಿಸಿದರು.

www.bantwalnews.com report

ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1966ರಲ್ಲಿ ಮಿತ್ತೂರು ಎಂಬ ಸಣ್ಣ ಗ್ರಾಮದಲ್ಲಿ ಅಂದಿನ ಬಡವರು ಸೇರಿ ಕಟ್ಟಿಸಲಾದ ಈ ಮಿತ್ತೂರು ಸಿರಾಜುಲ್ ಹುದಾ ಮಸೀದಿಗೆ ಇದೀಗ ಸ್ವರ್ಣ ಮಹೋತ್ಸವದ ಸಡಗರವಾಗಿದೆ. ಪಣಂಬೂರು ಎಂಬಲ್ಲಿ ಹಳೆಯದಾದ ಮಸೀದಿಯೊಂದನ್ನು ಕೆಡವಿ ಜೆಪ್ಪು ಮೊಹಿದು ಕುಟ್ಟಿ ಹಾಜಿಯವರ ಪರಿಶ್ರಮದಿಂದ ಮಸೀದಿಯ ಮರ ಮಟ್ಟು ಹಂಚುಗಳನ್ನು ಮಿತ್ತೂರಿಗೆ ತಂದು ಎತ್ತರವಾದ ಸ್ಥಳದಲ್ಲಿ ಮಸೀದಿಯನ್ನು ಸ್ಥಾಪಿಸಲಾಗಿತ್ತು. ದಿವಂಗತ ಮಮ್ಮಿ ಮಾಸ್ಟರ್ ಹಾಜಿ ಮುಂತಾದ ನೇತಾರರು ಮಸೀದಿ ಸ್ಥಾಪನೆಗೆ ಬಹಳಷ್ಟು ಸೇವೆ ಸಲ್ಲಿಸಿದ್ದರು ಎಂದು ವಿವರಿಸಿದರು.

ಜಾಹೀರಾತು

20ರಂದು ಮಸೀದಿ ಅಧ್ಯಕ್ಷ ಮೌಲಾನ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉದ್ಘಾಟಿಸಲಿದ್ದು, ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಬ್ದುಲ್ಲ ಫೈಝಿ ಚೆಂಗಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

21ರಂದು ನಡೆಯಲಿರುವ ಸ್ವಲಾತ್ ಮಜ್ಲಿಸ್‌ನ ನೇತೃತ್ವವನ್ನು ಸೈಯ್ಯದ್ ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಕೇರಳ ವಹಿಸಲಿದ್ದು, ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಅಬ್ದುಲ್ ಅಝೀಜ್ ಅಶ್ರಫಿ ಪಾಣತ್ತೂರು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಖತೀಬು ಅಶ್ರಫ್ ಅಝ್‌ಹರಿ, ಜತೆ ಕಾರ್ಯದರ್ಶಿ ಪಿ.ಕೆ ಉಮ್ಮರ್, ಸದಸ್ಯ ಕೆ.ಬಿ ಶಾಹುಲ್ ಹಮೀದ್, ಅಬೂಬಕ್ಕರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ