ವಿಟ್ಲ

ವಿಟ್ಲ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮ

ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜಗೋಪುರ, ಆನೆಬಾಗಿಲು, ತೀರ್ಥಮಂಟಪ, ಒಳಾಂಗಣ ಹಾಸುಕಲ್ಲು ಮೊದಲಾದ ಕಾಮಗಾರಿಗಳ ಲೋಕಾರ್ಪಣೆ ಅಂಗವಾಗಿ ಬುಧವಾರ ರಾತ್ರಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ, ವಾಸ್ತು ಬಲಿ, ರಕ್ಷಾ ಕಲಶ ಆಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಪದ್ಮನಾಭ ತಂತ್ರಿ ಹಾಗೂ ಕುಂಟುಕುಡೇಲು ಬ್ರಹ್ಮಶ್ರೀ ವೇದಮೂರ್ತಿ ರಘುರಾಮ ತಂತ್ರಿ ಅವರ ನೇತೃತ್ವದಲ್ಲಿ ನೆರವೇರಿತು.

ಗುರುವಾರ 108 ತೆಂಗಿನಕಾಯಿ ಗಣಪತಿ ಹೋಮ, ಪೂರ್ಣಾಹುತಿ, ಬಿಂಬ ಶುದ್ಧಿ, ಬಲಿಕಲ್ಲು ಪ್ರತಿಷ್ಠೆ,ಶ್ರೀ ಪಂಚಲಿಂಗ ಪುಷ್ಕರಣಿಯಲ್ಲಿ ಶಿವಲಿಂಗ ಪ್ರತಿಷ್ಠೆ, ಕಲಶಾಭಿಷೇಕ ಪೂಜೆ, ಶ್ರೀ ಪಂಚಲಿಂಗೇಶ್ವರನಿಗೆ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಮಹಾಸಂತರ್ಪಣೆ ಮತ್ತು ಶ್ರೀ ಪಂಚಲಿಂಗ ಪುಷ್ಕರಣಿಯಲ್ಲಿ ಶಿವಲಿಂಗ ಪ್ರತಿಷ್ಠೆ ನಡೆಯಿತು.

ಜಾಹೀರಾತು

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್.ಕೂಡೂರು, ಆನುವಂಶಿಕ ಮೊಕ್ತೇಸರ ವಿ.ಜನಾರ್ದನ ವರ್ಮ ಅರಸರು, ಮುಖ್ಯಸ್ಥರಾದ ಎಚ್.ಜಗನ್ನಾಥ ಸಾಲ್ಯಾನ್, ಬಿ.ಶಾಂತಾರಾಮ ಶೆಟ್ಟಿ, ಪಿ.ರಾಧಾಕೃಷ್ಣ ಪೈ, ಸುಬ್ರಾಯ ಪೈ, ನಂದ ವರ್ಮ ಅರಸರು, ನರಸಿಂಹ ವರ್ಮ, ಕೃಷ್ಣಯ್ಯ ಕೆ.ವಿಟ್ಲ, ದಯಾನಂದ ಆಳ್ವ ಕಡಂಬು, ಸದಾಶಿವ ಆಚಾರ್ಯ ಕೈಂತಿಲ, ವಿ.ರಾಮದಾಸ ಶೆಣೈ, ಎಂ.ನಿತ್ಯಾನಂದ ನಾಯಕ್, ಎಂ.ರಾಧಾಕೃಷ್ಣ ನಾಯಕ್, ಎಂ.ಹರೀಶ್ ನಾಯಕ್, ಸುಭಾಶ್ಚಂದ್ರ ನಾಯಕ್, ಪ್ರಭಾಕರ ಶೆಟ್ಟಿ ದಂಬೆಕಾನ, ಶಶಿಕಾಂತ ಪ್ರಭು, ಕೆ.ಕೆ.ಸಂಜೀವ, ಅನಂತಪ್ರಸಾದ್, ರಾಘವೇಂದ್ರ ಪೈ, ಚಂದ್ರಶೇಖರ ರೈ, ಸೀಮೆಯ ಗುರಿಕ್ಕಾರರು, ಹಲವು ಸಂಘ ಸಂಸ್ಥೆಯ ಮುಖ್ಯಸ್ಥರು, ಮಂಜಲಾಡಿ ಕುಟುಂಬಸ್ಥರು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ