ಬಂಟ್ವಾಳ: ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯುವ ಪಂಚತೀರ್ಥ, ಸಪ್ತಕ್ಷೇತ್ರ ರಥಯಾತ್ರೆಗೆ ಬಂಟ್ವಾಳ ತಾಲೂಕಿನ ಹಿಂದು ಜಾಗರಣಾ ವೇದಿಕೆ ಬೆಂಬಲ ಸೂಚಿಸಿದೆ.
ಈ ಯೋಜನೆ ಅನುಷ್ಥಾನಗೊಂಡರೆ ಜಿಲ್ಲೆಯಲ್ಲಿ ಜಲ ಮತ್ತು ಪುಣ್ಯ ನೆಲಗಳು ಬರಡಾಗಬಹುದು. ಜಿಲ್ಲೆಯ ಜನರ ಜೀವನ, ಪಶು ಪಕ್ಷಿಗಳಿಗೆ ಬದುಕಲು ತೊಂದರೆಯಾಗಬಹುದು ಎಂದು
ಹಿಂ.ಜಾ.ವೇ. ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ ಹಾಗೂ ಸಂಚಾಲಕ ಪ್ರಶಾಂತ್ ಕೆಂಪುಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.