ಬಂಟ್ವಾಳ: ಬಿ.ಸಿ.ರೋಡಿನ ಫ್ಲೈಓವರ ಕಡೆ ಡ್ರೈನೇಜ್ ಮಾಡಿದರೆ ಯಾರಿಗೆ ಅನುಕೂಲ?
ಹೀಗೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಉತ್ತರಿಸಲು ತಡವರಿಸಿದರು.
ಬಂಟ್ವಾಳದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲ ಮಾತನಾಡಿದ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್, ಬಿ.ಸಿ.ರೋಡ್ ಪೇಟೆಯ ಸಮಗ್ರ ಅಭಿವೃದ್ಧಿಗೆ ಸರಿಯಾದ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಡಿಸಿಪ್ಲೀನ್ ಇಲ್ಲದಂತೆ ಬಿ.ಸಿ.ರೋಡ್ ಬೆಳೆಯುತ್ತಿದೆ, ಇದನ್ನು ಸರಿದಾರಿಗೆ ತರಲು ಏನೇನು ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯರನ್ನು ಪ್ರಶ್ನಿಸಿದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಗೋವಿಂದ ಪ್ರಭು, ಸದಾಶಿವ ಬಂಗೇರ, ಮೋನಿಶ್ ಆಲಿ, ದೇವದಾಸ ಶೆಟ್ಟಿ, ವಾಸು ಪೂಜಾರಿ ಮೊದಲಾದವರು ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭ ತಮ್ಮ ಯೋಜನೆಯನ್ನು ವಿವರಿಸಿದ ಜಿಲ್ಲಾಧಿಕಾರಿ, ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ಬಿ.ಸಿ.ರೋಡ್ ಅಭಿವೃದ್ಧಿಗೆ ಡಿಸಿ ಕಂಡುಕೊಂಡ ಕ್ರಮಗಳು ಇವು.