ಬಂಟ್ವಾಳ

ಅಕ್ರಮ ಮರಳು ಅಡ್ಡೆಗೆ ದಾಳಿ

ಬಂಟ್ವಾಳ: ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ ದಾಳಿ ನಡೆಸಿದೆ.

ಸರಪಾಡಿ ಗ್ರಾಮದ ಮಣಿನಾಲ್ಕೂರು, ಕಡವಿನಬಾಗಿಲು, ಅರ್ಮುಡಿ, ಪೆರ್ಲ, ಬಿಯಾಪಾದೆ ಎಂಬಲ್ಲಿ ಬಂಟ್ವಾಳ ಹೋಬಳಿ  ಕಂದಾಯ ನಿರೀಕ್ಷಕರಾದ ನವೀನ್ ನೇತೃತ್ವದಲ್ಲಿ ಕಂದಾಯ  ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ 5  ಗಂಟೆ ಸುಮಾರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ  ದಿಡೀರ್ ದಾಳಿ ನಡೆಸಿದರು.ಈ ಸಂದರ್ಭ ಎರಡು ಗ್ಯಾಸ್ ಸಿಲಿಂಡರ್, ಸ್ಟವ್, ಹಾರೆ, ಬುಟ್ಟಿ  ಇನ್ನಿತರ ಸಲಕರಣೆಗಳನ್ನು  ವಶಪಡಿಸಿಕೊಳ್ಳಲಾಯಿತು.

ಜಾಹೀರಾತು

ಕಾರ್ಯಾಚರಣೆ ವೇಳೆ ನದಿ ತಟದಲ್ಲಿ ಮರಳುಗಾರಿಕೆಯವರು ತಂಗಲು ಹಾಕಿದ  ಡೇರೆಯನ್ನು ಸಂಪೂರ್ಣವಾಗಿ  ತೆರವು ಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಬಂಟ್ವಾಳ ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮ ಕರಣಿಕರಾದ ಜನಾರ್ಧನ್,ಪ್ರವೀಣ್, ರಾಜು ಲಮಾಣಿ, ಅನಿಲ್, ನಿಂಗಪ್ಪ

ಸಿಬ್ಬಂದಿಗಳಾದ ವೆಂಕಟರಮಣ, ಲೋಕನಾಥ್, ಸಂತೋಷ್, ಸಂದೀಪ್. ಕೆ, ರಮೇಶ್. ಬಾಬು. ತಿಲಕ್ ರಾಜ್ ಕಾರ್ಯಾಚರಣೆ ವೇಳೆ ಸಹಕರಿಸಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ