ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ಒಟ್ಟು 11,196 ಮಂದಿಗೆ ಪಿಂಚಣಿ ಸ್ಥಗಿತಗೊಳಿಸಲಾಗಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಜ.ಪರಮೇಶ್ವರ್ ಅವರು ಈ ಉತ್ತರ ನೀಡಿದ್ದಾರೆ.
ಕ್ಷೇತ್ರದಲ್ಲಿವಿವಿಧ ಕಾರಣಗಳಿಂದ ಒಟ್ಟು 11,196 ಪಿಂಚಣಿ ಪ್ರಕರಣಗಳನ್ನು ಸ್ಥಗಿತಗೊಳಿಸಲು ಗುರುತಿಸಲಾಗಿದೆ. ಈ ಪೈಕಿ 5,243 ಪ್ರಕರಣಗಳು ಇ ಜನ್ಮ ದಾಖಲೆಯ ಆಧಾರದ ಮೇಲೆ ಮರಣ ಹೊಂದಿದವರು, 3,399 ಮರಣ ಪ್ರಕರಣಗಳು, 684 ಶಾಶ್ವತ ವಲಸೆ, 565 ಬಹು ಪ್ರಯೋಜನ ಪಡೆಯುತ್ತಿರುವ ಪ್ರಕರಣಗಳು ಹಾಗೂ 286 ವಿಎಒ ಪರಿಶೀಲನೆಯಲ್ಲಿ ಅನರ್ಹ ಎಂದು ಗುರುತಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಇದಲ್ಲದೆ, 813 ಇತರೆ ಪ್ರಕರಣಗಳು, 168 ಆದಾಯ ಹೆಚ್ಚಳ ಮತ್ತು 38 ಮರುಮದುವೆ ಪ್ರಕರಣಗಳು ಸಹ ಸ್ಥಗಿತಕ್ಕೆ ಗುರುತಿಸಲಾದ ಪಟ್ಟಿಯಲ್ಲಿ ಸೇರಿವೆ.ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಒಟ್ಟು 37,291 ಫಲಾನುಭವಿಗಳು ದಾಖಲಾಗಿದ್ದಾರೆ ಎಂದು ಸರ್ಕಾರದ ಉತ್ತರದಲ್ಲಿ ತಿಳಿಸಲಾಗಿದೆ.