ಪ್ರಮುಖ ಸುದ್ದಿಗಳು

“ವೈಮಾಂತರಿಕ್ಷ, ​​ರಕ್ಷಣಾ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಸ್ತುತ ಮತ್ತು ಭವಿಷ್ಯದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನಗಳು” ವಿಷಯದ ಕುರಿತು ರಾಷ್ಟ್ರೀಯ ಕನ್ನಡ ವಿಜ್ಞಾನ ಸಮ್ಮೇಳನ: ಭಾಗವಹಿಸಲು ಆಹ್ವಾನ – Details

ಸಿಎಸ್ಐಆರ್-ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು (ಸಿಎಸ್ಐಆರ್-ಎನ್ಎಎಲ್) ಹಾಗೂ ಸಿಎಸ್ಐಆರ್-ಎನ್ಐಡಿಎಸ್ಎ (ಹಿಂದೆ ಸಿಎಸ್ಐಆರ್-4ಪಿಐ) ಜಂಟಿಯಾಗಿ 4ನೇ ರಾಷ್ಟ್ರೀಯ ಕನ್ನಡ ವಿಜ್ಞಾನ ಸಮ್ಮೇಳನವನ್ನು (ರಾಕವಿಸ-2026) ಬೆಂಗಳೂರಿನ ಸಿಎಸ್ಐಆರ್-ಎನ್ಎಎಲ್ ನಲ್ಲಿ ಆಯೋಜಿಸಲು ಸಜ್ಜಾಗಿದೆ.

ನವೆಂಬರ್ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.  ಪ್ರತಿ ಎರಡು ವರ್ಷಗಳಿಗೊಮ್ಮೆ ಸಮ್ಮೇಳನವನ್ನು ನಡೆಸಲಾಗುತ್ತದೆ. ಇದಲ್ಲದೆ, ಕಾರ್ಯಕ್ರಮದಲ್ಲಿ ಕನ್ನಡ ಸಾಂಸ್ಕೃತಿಕ ಸಂಘ ಮತ್ತು ಸಿಎಸ್ಐಆರ್-ಎನ್ಎಎಲ್  ಕಳೆದ 51 ವರ್ಷಗಳಿಂದ ಪ್ರಕಟಿಸುತ್ತಿರುವ “ಕಣಾದ” ಕನ್ನಡ-ವಿಜ್ಞಾನ ವಾರ್ಷಿಕ ನಿಯತಕಾಲಿಕವನ್ನು ಸಹ  ಬಿಡುಗಡೆ ಮಾಡಲಾಗುವುದು.

ಸಮ್ಮೇಳನದ ಪ್ರಾಥಮಿಕ ಉದ್ದೇಶವೆಂದರೆ, ಉದ್ಯಮದ ಪಾಲುದಾರರು (MSME, ಖಾಸಗಿ, ಸಾರ್ವಜನಿಕ), ವೈಜ್ಞಾನಿಕ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಗತಿಯನ್ನು ಮತ್ತು ನಾವೀನ್ಯತೆಗಳನ್ನು (ADA, GTRE, ADE, LRDE, HAL, BEML, BEL, ಮತ್ತು ಭಾರತದಾದ್ಯಂತದ ಶಿಕ್ಷಣ ಸಂಸ್ಥೆಗಳು) ಪ್ರಸ್ತುತಪಡಿಸಲು ಮತ್ತು ಪ್ರದರ್ಶಿಸಲು ಒಂದು ವೇದಿಕೆಯನ್ನು ರಚಿಸುವುದು. ಜೊತೆಗೆ ವರ್ಷ, ಭಾರತದಾದ್ಯಂತದ ಎಲ್ಲಾ ಸಿಎಸ್ಐಆರ್ ಪ್ರಯೋಗಾಲಯಗಳಿಂದ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು 2026 ನವೆಂಬರ್ 19 ರಿಂದ 20 ರವರೆಗೆ ವೇದಿಕೆಯನ್ನು ಕಲ್ಪಿಸಲಾಗಿದೆ.

ಜಾಹೀರಾತು

ಸಮ್ಮೇಳನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಕನ್ನಡ ಭಾಷೆಯಲ್ಲಿ ತಾಂತ್ರಿಕ ಪ್ರಬಂಧವನ್ನು ಬರೆದು ಕಳುಹಿಸಲು ಆಹ್ವಾನಿಸಲಾಗಿದೆ. ಲೇಖನದ ಶೀರ್ಷಿಕೆ + ಸಾರಾಂಶವನ್ನು ಸಲ್ಲಿಸಲು ಕೊನೆಯ ದಿನಾಂಕ: 30-08-2026, ಸಮ್ಮೇಳನ ದಿನಾಂಕ:  20-11-2026 ವಾಗಿದೆ ಎಂದು ಸಂಯೋಜಕ ಡಾ. ಗಿರೀಶ  ಯಾನಮಶೆಟ್ಟಿ ತಿಳಿಸಿದ್ದಾರೆ.

OPTIC WORLD
VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.