ಪ್ರಮುಖ ಸುದ್ದಿಗಳು

PUTTUR: ಪುತ್ತೂರು: ವ್ಹೀಲ್ ಚೇರ್ ನಲ್ಲಿ ಆಗಮಿಸಿ ಮತ ಚಲಾಯಿಸಿದ ದೇವಕಿ ಭಟ್ ನಿಧನ

ಜಾಹೀರಾತು

ಜಾಹೀರಾತು

ಪುತ್ತೂರು: ಶುಕ್ರವಾರ ಚುನಾವಣೆಯ ದಿನ ನಡೆಯಲು ಅಸಾಧ್ಯವಾದ ಕಾರಣ, ವ್ಹೀಲ್ ಚೇರ್ ನಲ್ಲಿ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ ಸಂತೃಪ್ತಿಯಿಂದ ಮರಳಿದ ಪುತ್ತೂರು ಬೊಳುವಾರು ನಿವಾಸಿ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ದೇವಕಿ ಎಸ್. ಭಟ್ (82) ಅವರು ಏಪ್ರಿಲ್ 26ರ ರಾತ್ರಿ ನಿಧನಹೊಂದಿದರು.

ಬೆಳಗ್ಗೆ ಬೊಳುವಾರು ಸರಕಾರಿ ಶಾಲಾ ಮತಗಟ್ಟೆಗೆ ಆಗಮಿಸಿದ್ದ ಅವರು, ಬಿಎಲ್ಒ ಯಶೋಧಾ ಅವರ ಸಹಾಯದಿಂದ ಗಾಲಿಕುರ್ಚಿಯ ಮೂಲಕ ತೆರಳಿ, ಮತ ಚಲಾವಣೆ ಮಾಡಿದ್ದರು. ಬಳಿಕ ಮನೆಗೆ ಮರಳಿದ್ದ ಅವರು ರಾತ್ರಿ ಊಟ ಮುಗಿಸಿ, ಮಲಗಿದ್ದರು. ತಡರಾತ್ರಿ ವೇಳೆ ಅವರು ನಿಧನಹೊಂದಿದ್ದರು. ಪತಿ, ಆರು ಪುತ್ರಿಯರ ಸಹಿತ ಅಪಾರ ಬಂಧು ಬಾಂಧವರನ್ನು ಅವರು ಅಗಲಿದ್ದು, ಶನಿವಾರ ಅಂತ್ಯಕ್ರಿಯೆ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂಧೂರು, ಪುತ್ತೂರು ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ರಾಮದಾಸ ಹಾರಾಡಿ, ಪ್ರಮುಖರಾದ ದಯಾಕರ್ ಸಹಿತ ಹಲವರು ಮೃತರ ಅಂತಿಮ ದರ್ಶನ ಪಡೆದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ