ಬಂಟ್ವಾಳ

ಗೂಗಲ್ ದಾರಿ ನೋಡಿ ಸೇತುವೆಯಡಿ ಸಿಲುಕಿದ ಘನ ಲಾರಿ

ಗೂಗಲ್ ಮ್ಯಾಪ್ ಹಾಕಿ ಸಂಚರಿಸುವ ಸಂದರ್ಭ ತೋರಿಸಿದ ದಾರಿಯಲ್ಲಿ ಸಾಗಿದ ಘನಗಾತ್ರದ ಲಾರಿಯೊಂದು ಮೊಡಂಕಾಪು ರೈಲ್ವೆ ಮೇಲ್ಸೇತುವೆಯಡಿ ಸಿಲುಕಿಕೊಂಡ ಘಟನೆ ಶನಿವಾರ ನಡೆದಿದೆ. ಬಳಿಕ ಬಂಟ್ವಾಳದ ಮೆಲ್ಕಾರ್ ನಲ್ಲಿರುವ ಟ್ರಾಫಿಕ್ ಠಾಣಾ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಜಾಹೀರಾತು

ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕೆಮಿಕಲ್ ತುಂಬಿದ ಬ್ಯಾರಲ್ ಗಳನ್ನು ಸಾಗಿಸುತ್ತಿದ್ದ ದೊಡ್ಡ ಟ್ರಕ್ ಮಾದರಿಯ ಘನಗಾತ್ರದ ಲಾರಿಯ ಚಾಲಕ ಗೂಗಲ್ ಮ್ಯಾಪ್ ಹಾಕಿದ್ದರು. ಈ ಸಂದರ್ಭ ಯಾವುದೋ ಸಂದರ್ಭ ರೂಟ್ ಪೊಳಲಿ ಮಾರ್ಗದತ್ತ ತೋರಿಸಿತು.

ಬಿ.ಸಿ.ರೋಡ್ ಕಳೆದು, ಹೆದ್ದಾರಿಯಿಂದ ಪೊಳಲಿ ದ್ವಾರದತ್ತ ಪಥ ಬದಲಾಯಿಸಿದ ಚಾಲಕ ನೇರವಾಗಿ ಸಣ್ಣ ಮಾರ್ಗದಲ್ಲಿ ಮುಂದೆ ಹೋದಾಗ, ಘನ ಗಾತ್ರದ ವಾಹನಗಳು ಹೋಗಬಾರದು ಎಂದು ರೈಲ್ವೆ ಸೇತುವೆಯಡಿ ಕಬ್ಬಿಣದ ರಾಡ್ ಹಾಕಿದ್ದು ಕಂಡು ಕಕ್ಕಾಬಿಕ್ಕಿಯಾಗಿದ್ದಾನೆ.

ಇದೇ ಮೊದಲ ಬಾರಿ ಬಂದ ಲಾರಿ ಚಾಲಕ ಮ್ಯಾಪ್ ತೋರಿಸಿದ ಜಾಗಕ್ಕೆ ಹೋಗಿ ಸಮಸ್ಯೆ ಅನುಭವಿಸಿದ್ದಾನೆ. ಘಟನೆಯಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಮೆಲ್ಕಾರ್ ಟ್ರಾಫಿಕ್ ಠಾಣಾ ಎಎಸ್ಸೈ ಸುರೇಶ್ ಪಡಾರ್, ಸಂಚಾರಕ್ಕೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕ್ರೇನ್ ತರಿಸಿ ಲಾರಿಯನ್ನು ಬದಿಗೆ ತರಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ