ಬಂಟ್ವಾಳ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ – ದೀಪಾಲಂಕಾರದ ಆಕರ್ಷಕ ಫೊಟೋಗಳು ಇಲ್ಲಿವೆ

ಬಂಟ್ವಾಳದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗಿನ ಜಾವ ಶ್ರೀವಿಶ್ವರೂಪದರ್ಶನ ನಡೆಯಿತು. ಕಾರ್ತಿಕ ಶುದ್ಧ ಷಷ್ಠಿ ಉಪರಿ ಸಪ್ತಮಿಯಾದ ಭಾನುವಾರ ಪ್ರಾತಃಕಾಲ 4 ಗಂಟೆಗೆ  ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ  ತಿರುಮಲ ವೆಂಕಟರಮಣ ದೇವರ ದಿವ್ಯ  ಸನ್ನಿಧಿಯಲ್ಲಿ  ಲೋಕ ಕಲ್ಯಾಣಕ್ಕಾಗಿ 22ನೇ  ವರ್ಷದ  ವಿಶ್ವರೂಪದರ್ಶನ ಸೇವೆಯನ್ನು ದಿವ್ಯ ಜ್ಯೋತಿ  ಬೆಳಗಿಸಿ ಸಮಸ್ತ  ಭಜಕ ವೃಂದದವರ ಸಹಕಾರದೊಂದಿಗೆ ನಡೆಸಲಾಯಿತು. ಪ್ರಾತಕಾಲ 5 ಗಂಟೆಗೆ  ಕಾಕಡಾರತಿ, ಜಾಗರ ಪೂಜೆ ನಂತರ ವಿಶೇಷಾಲಂಕಾರ ಶ್ರೀ  ದೇವರ  ವಿಶೇಷ  ವಿಶ್ವರೂಪದರ್ಶನ ಭಾಗ್ಯ, ಪ್ರಸಾದ  ವಿತರಣೆ ನಡೆದವು.ದೀಪಾಲಂಕಾರದಲ್ಲಿ ಶಂಖ, ಚಕ್ರ, ಗದಾ, ಪದ್ಮಾಲಂಕಾರಗಳು, ಹನುಮಂತನ ಅಲಂಕಾರ ಸಹಿತ ಬಂಟ್ವಾಳ ದೇವಸ್ಥಾನದ ಸುತ್ತಲೂ ಬೆಳಕಿನ ವೈಭವ ಕಂಡುಬಂದವು. ವಿಶೇಷವಾಗಿ ಹೂಗಳಿಂದ ತ್ರಿವರ್ಣ ರಚಿಸಿ,  ಕಪ್ ರೀತಿಯಲ್ಲಿ ಚಿತ್ರಿಸಿ, ಸುತ್ತಲೂ ದೀಪವಿಟ್ಟು, ಅದರ ಪಕ್ಕ ಆಲ್ ದಿ ಬೆಸ್ಟ್ ಇಂಡಿಯಾ ಎಂಬ ಹೂಗಳ ಅಲಂಕಾರ ಮಾಡಿ, ಸುತ್ತಲೂ ದೀಪಾಲಂಕಾರ ಮಾಡಿರುವುದು ಗಮನ ಸೆಳೆಯಿತು. ಕ್ರಿಕೆಟ್ ಫೈನಲ್ ಪಂದ್ಯಾಟ ಭಾನುವಾರ ಸಂಜೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಅಲಂಕಾರವನ್ನು ಮಾಡಲಾಗಿತ್ತು.ಶಿಲೆ ಶಿಲೆ ಹಕ್ಕಿನ  ಮೊಕ್ತೇಸರರಾಧ ಬಿ. ಸೂರ್ಯನಾರಾಯಣ  ಬಾಳಿಗಾ, ಆಡಳಿತ ಮೊಕ್ತೇಸರರಾಧ ಬಿ. ಅಶೋಕ್ ಶೆಣೈ, ಮೊಕ್ತೇಸರರಾಧ ಭಾಮಿ ನಾಗೇಂದ್ರನಾಥ ಶೆಣೈ, ಬಿ. ಸುರೇಶ್.ವಿ.ಬಾಳಿಗಾ ಉಪಸ್ಥಿತರಿದ್ದರು ಫೊಟೋಗಳು ಇಲ್ಲಿವೆ ಚಿತ್ರಗಳು: Venkatramana Pai K

ಜಾಹೀರಾತು

ಜಾಹೀರಾತು

 

ಜಾಹೀರಾತು

ಜಾಹೀರಾತು

ಜಾಹೀರಾತು

 

ಜಾಹೀರಾತು

ಜಾಹೀರಾತು

\

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts