ಪ್ರಮುಖ ಸುದ್ದಿಗಳು

ಸುಳ್ಯದಲ್ಲಿ ಗುಂಡಿನ ದಾಳಿ, ವ್ಯಕ್ತಿ ಪಾರು

 ಸುಳ್ಯ: ಸುಳ್ಯದಲ್ಲಿ ಭಾನುವಾರ ರಾತ್ರಿ ಕಾರಿನ ಬಳಿ ಬಂದ ವ್ಯಕ್ತಿಯೊಬ್ಬರ ಮೇಲೆ ಮತ್ತೊಂದು ಕಾರಿನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭ ಕಾರಿಗೆ ಗುಂಡು ತಾಗಿದ ಕಾರಣ ಅವರು ಪಾರಾಗಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್ ಸಾಯಿ (39) ಎಂಬವರು ತನ್ನ ಹೆಂಡತಿಯ ತಂಗಿಯ ಮದುವೆ ಕಾರ್ಯಕ್ರಮವನ್ನು ಬಂಟ್ವಾಳದಲ್ಲಿ ಮುಗಿಸಿ ಸುಳ್ಯಕ್ಕೆ ಬಂದು ರಾತ್ರಿ ಸುಮಾರು 10.30ಕ್ಕೆ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರದ ವೆಂಕಟರಮಣ ಸೊಸೈಟಿ ಬಳಿ ತನ್ನ ಕ್ರೇಟಾ ಕಾರು ನಿಲ್ಲಿಸಿ, ತಂಗಿ ಮನೆಗೆ ಹೋಗಿ ವಾಪಸ್ ಕಾರಿನ ಬಳಿ ಬಂದು ಬಾಗಿಲು ತೆರೆಯಲು ಹೊರಡುವ ಸಂದರ್ಭ, ಸ್ಕಾರ್ಪಿಯೋ ಕಾರೊಂದರಲ್ಲಿದ್ದ ನಾಲ್ವರು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಗುಂಡು ಮಹಮ್ಮದ್ ಸಾಯಿ ಅವರ ಬೆನ್ನಿನ ಎಡಬದಿಗೆ ತಾಗಿ ಕಾರಿನ ಬಲಬದಿಯ ಎರಡು ಡೋರ್ ಗಳ ಮಧ್ಯೆ ತಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ