ಕಲ್ಲಡ್ಕ

ದಿನವಿಡೀ ಮಳೆ, ಮೆಲ್ಕಾರ್, ಕಲ್ಲಡ್ಕ ಹೆದ್ದಾರಿ ಅಯೋಮಯ

FOR ADVERTISEMENTS PLEASE CONTACT: HARISH MAMBADY, 9448548127

ಚಿತ್ರ: ವರುಣ್ ಸ್ಟುಡಿಯೋ, ಕಲ್ಲಡ್ಕ

ಬಂಟ್ವಾಳ: ದಿನವಿಡೀ ಸುರಿಯತ್ತಿರುವ ಮಳೆಯಿಂದಾಗಿ ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿರುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್, ಕಲ್ಲಡ್ಕ ಭಾಗಗಳಲ್ಲಿ ಸಂಚಾರವಷ್ಟೇ ಅಲ್ಲ, ಸಮೀಪದ ಮನೆ, ಅಂಗಡಿ ಮುಂಗಟ್ಟುಗಳವರೂ ತೊಂದರೆ ಪಡುವಂತಾಗಿದೆ.

ಹೆದ್ದಾರಿ ಅಗಲಗೊಳ್ಳುವ ಪ್ರಕ್ರಿಯೆ ಸಂದರ್ಭ ರಸ್ತೆ ಹೊಂಡ ಮಾಡಲಾಗಿದ್ದು, ವಿವಿಧ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಮಣ್ಣು ರಾಶಿಯಾಗಿ ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅಪಾಯದ ಪರಿಸ್ಥಿತಿ ಎದುರಿಸುವಂತಾಗಿದೆ. ಕಲ್ಲಡ್ಕದಿಂದ ವಿಟ್ಲ ಕಡೆಗೆ ಹೋಗುವ ಸಂದರ್ಭ ಮತ್ತು ಮೆಲ್ಕಾರ್ ನಿಂದ ಮುಡಿಪುವಿನ ಕಡೆಗೆ ತೆರಳುವ ಪ್ರದೇಶಗಳಲ್ಲಿ ವಾಹನ ಸವಾರರು ಪರದಾಟ ಅನುಭವಿಸುವಂತಾಯಿತು.  ಈಗಲೇ ಈ ಪರಿಸ್ಥಿತಿಯಾಗಿದ್ದರೆ, ಹೆದ್ದಾರಿ ಪಕ್ಕ ಇರುವ ಕಟ್ಟಡಗಳು ಅಪಾಯದ ಸ್ಥಿತಿ ಎದುರಿಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತ ಸಜ್ಜಾಗುವ ಅನಿವಾರ್ಯತೆ ಇದೆ. ಕಲ್ಲಡ್ಕ ಸಮೀಪವೇ ಇರುವ ಮನೆಯೊಂದರ ಮೇಲೆ ಹೆದ್ದಾರಿ ಎತ್ತರಿಸಿದ ಪರಿಣಾಮ ಮಣ್ಣಿನ ರಾಶಿಯೇ ಬಿದ್ದಿದ್ದು ಮನೆಯವರು ಪರದಾಟ ನಡೆಸುವ ದೃಶ್ಯ ಮನಕಲಕುವಂತಿತ್ತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ