ಬಂಟ್ವಾಳ: ಶ್ರೀ ಕೃಷ್ಣ ಭಜನಾ ಮಂದಿರ(ರಿ) ಕರಿಮಜಲು – ಕೆದಿಲ,ದಶಮಾನೋತ್ಸವ ಅಂಗವಾಗಿ ಡಿ. 25ರಂದು ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಗೋಪಾಲಕೃಷ್ಣ ಭಟ್ ಗಾಂಧಿನಗರ, ಬಾಲಪ್ಪ ಗೌಡ ಕುದುಂಬ್ಲಾಡಿ, ಉಮೇಶ್ ಪೂಜಾರಿ ಮುರುವ, ಲಕ್ಷ್ಮಣ ಕುಲಾಲ್ ಆನೆಡ್ಕ, ಚಂದ್ರಶೇಖರ ಭಟ್ ಕುಕ್ಕಾಜೆ, ಶಾರದ ಕಂಪ, ಹರೀಶ್ ಕುದುಂಬ್ಲಾಡಿ ಮತ್ತು ಮಂದಿರದ ಅಧ್ಯಕ್ಷರಾದ ಶ್ರೀನಿವಾಸ ಕುದುಂಬ್ಲಾಡಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.