ಪುಂಜಾಲಕಟ್ಟೆ

ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ಹಿಂದುಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಶ್ರೀ ಕಾರಿಂಜೇಶ್ವರ ಕ್ಷೇತ್ರ ಸ್ವಚ್ಛತಾ ಅಭಿಯಾನ ನಡೆಯಿತು.

ದೇವಸ್ಥಾನದ ಕೇಳಬಾಗದಲ್ಲಿ(ಬೀದಿ) ಸೇರಿ ಮೆಟ್ಟಿಲುಗಳ ಸ್ವಚ್ಛತೆ ನಡೆಯಿತು. ಹಿಂ.ಜಾ.ವೇ.ಬಂಟ್ವಾಳ ತಾಲೂಕಿನ ಸುಮಾರು ಇನ್ನುರೈವತು ಕಾರ್ಯಕರ್ತರು ಸ್ವಚ್ಚತಾ ಕಾರ್ಯಕ್ರಮದಲ್ಲಿ  ಭಾಗವಹಿಸಿದರು. ಪ್ರಮುಖರಾದ ಅಜೀತ್ ಶೆಟ್ಟಿ ಕಾರಿಂಜ, ಚಂದ್ರ ಶೇಖರ ಮಾತನಾಡಿದರು.

ಹಿಂ.ಜಾ.ವೇ.ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ಮಾತನಾಡಿ, ಮುಂದಿನ ದಿನಗಳಲ್ಲಿ ಹಿಂದು ದೇವಸ್ಥಾನದ ಸುರಕ್ಷತೆಗೆ ಹಿಂದು ಜಾಗರಣ ವೇದಿಕೆ ಬದ್ದವಾಗಿದೆ ಎಂದರು. ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ ಕಾರ್ಯದರ್ಶಿ ಗಳಾದ ಬಾಲಕೃಷ್ಣ ಕಲಯಿ, ಮನೋಜ್ ಪೆರ್ನೆ, ಜಿಲ್ಲಾ ನ್ಯಾಯ ಜಾಗರಣ ಪ್ರಮುಖ ರಾಜೇಶ್ ಬೊಳ್ಳುಕಲ್ಲು ಮತ್ತು ಬಂಟ್ವಾಳ ತಾಲೂಕು ಹಿಂದು ಜಾಗರಣ ವೇದಿಕೆ ಅಧ್ಯಕ್ಷರಾದ ತಿರುಲೇಶ್ ಬೆಳ್ಳೋರು, ತಾಲ್ಲೂಕು ಪ್ರದಾನ ಕಾರ್ಯದರ್ಶಿ ಯೋಗೀಶ್ ತುಂಬೆ, ತಾಲ್ಲೂಕು ಕಾರ್ಯದರ್ಶಿಗಳಾದ ರಮೇಶ್ ವೊಗ್ಗ, ಹರೀಶ್  ತಲೆಬಿಲ, ಶರಣ್ ಕಾಮಾಜೆ, ಜಗದೀಶ್ ಕಾಮಾಜೆ, ಮುರಳಿ ಪೊಳಲಿ, ಸಂಪರ್ಕ ಪ್ರಮುಕ್ ರವಿ ಕೆಂಪುಗುಡ್ಡೆ, ಮಾತ್ರ್ ಸುರಕ್ಷಾ ಪ್ರಮುಖ ಶಿವಪ್ರಸಾದ್ ಧನುಪೂಜೆ, ಹಿಂದು ಜಾಗರಣ ವೇದಿಕೆ ವಿಟ್ಲ ತಾಲ್ಲೂಕು ಅಧ್ಯಕ್ಷರು ಗಣೇಶ್ ಕೆದಿಲ ವಿಟ್ಲ ತಾಲ್ಲೂಕು ನಿಧಿ ಪ್ರಮುಖ ಕಿರಣ್ ನರಿಕೊಂಬು ಹಿಂದು ಜಾಗರಣ ವೇದಿಕೆ ವಲಯ ಪ್ರಮುಖರು ಮತ್ತು ತಾಲೂಕಿನ ಕಾರ್ಯಕರ್ತರು ಪರಿವಾರ ಸಂಘಟನೆಯ ಪ್ರಮುಖರು ಊರ ಪ್ರಮುಖರು ಉಪಸ್ಥಿತರಿದ್ದರು. ಹಿಂದು ಜಾಗರಣ ವೇದಿಕೆ ಪೆರಿಯಾರ್ ದೋಟ ಘಟಕ ಗೌರವ ಅಧ್ಯಕ್ಷರಾದ ಮನ್ಮಥ ಜೈನ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಹಿಂ. ಜಾ. ವೇ. ತಾಲ್ಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೋರು ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ