ಬಂಟ್ವಾಳ

ಪರಿಸರ ಉಳಿಸಲು ಗಿಡ ನೆಡುವ ಕಾರ್ಯ

ರಸ್ತೆ ವಿಭಜಕಗಳಲ್ಲಿ ಗಿಡ ನೆಟ್ಟ ರೋಟರಿ ಮೊಡಂಕಾಪು ನಿಯೋಜಿತ ಅಧ್ಯಕ್ಷ ಪ್ರೊ.ರಾವ್

ಬಂಟ್ವಾಳ: ಭಾನುವಾರ ಬಿ.ಸಿ.ರೋಡಿನ ಕೈಕಂಬದ ರಸ್ತೆ ವಿಭಜಕದಲ್ಲಿ ಪ್ರೊಫೆಸರ್ ಡಾ. ಗೋವರ್ಧನ ರಾವ್ ಮತ್ತು ಅವರ ಮಗ ಪ್ರಜ್ವಲ್ ಕುಮಾರ್ ಗಿಡ ನೆಡುವ ಮೂಲಕ ಗಮನ ಸೆಳೆದರು. ಪರಿಸರ ಉಳಿವಿಗಾಗಿ ಈ ಕಾರ್ಯ ನಡೆಸುತ್ತಿದ್ದೇವೆ ಎಂದು ರೋಟರಿ ಮೊಡಂಕಾಪು ವಿನ ನಿಯೋಜಿತ ಅಧ್ಯಕ್ಷರೂ ಆಗಿರುವ ರಾವ್ ಹೇಳಿದ್ದು, ರಸ್ತೆ ವಿಭಾಜಕದಲ್ಲಿ ಬಗೆ ಬಗೆಯ ಹೂವಿನ ಗಿಡ ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ. ಇವರಿಂದ ವಾತಾವರಣಕ್ಕೆ ಆಮ್ಲಜನಕದ  ಪೂರೈಕೆಯಾಗುತ್ತದೆ ಎಂದಿದ್ದು, ಬ್ರಹ್ಮರಕೂಟ್ಲುವರೆಗೂ ಗಿಡ ನೆಡುವ ಯೋಜನೆ ಕೈಗೊಂಡಿದ್ದಾರೆ. ತಮ್ಮ ಟೆರೇಸ್ನಲ್ಲೂ ಗಾರ್ಡನ್ ಮಾಡಿ ಮಾದರಿಯಾಗಿರುವ ರಾವ್, ಸರಕಾರಿ ಕಚೇರಿಗಳಾದ ಪೋಸ್ಟ್ ಅಫೀಸ್, ಬಸ್ಸು ನಿಲ್ದಾಣ, ಪೊಲೀಸ್ ಸ್ಟೇಷನ್, ರೈಲ್ವೇ ಸ್ಟೇಷನ್ಗಳಲ್ಲಿ ಗಿಡಗಳನ್ನು ನೆಡುವ ಅಥವಾ ಪಾಟ್ಗಲ್ಲಿ ನೆಟ್ಟು ಕೊಡುವ ಉದ್ಧೇಶವನ್ನಿಟ್ಟುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಪೇಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ