ವಿಶೇಷ ವರದಿ

ಹೆದ್ದಾರಿ ಸಂಚಾರ ಮತ್ತಷ್ಟು ಅಪಾಯಕಾರಿ

ಇದು ರಸ್ತೆ ರಿಪೇರಿ ಕಾರ್ಯ ನಡೆದಿದೆ ಎನ್ನಲಾದ ರಾಷ್ಟ್ರೀಯ ಹೆದ್ದಾರಿ 75ರ ನರಹರಿ ಪರ್ವತ ಬಳಿಯ ಮತ್ತು ಮೇಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣಾ ಸಮೀಪದ ದೃಶ್ಯ. ಮೇಲ್ಕಾರ್ ಟ್ರಾಫಿಕ್ ಠಾಣೆ ಪಕ್ಕ ರಸ್ತೆಗೆ ಡಾಂಬರು ಹಾಕಿದ ಕುರುಹುಗಳು ಇಲ್ಲ. ನರಹರಿ ಪರ್ವತ ಬಳಿಯಲ್ಲಿ ಡಾಂಬರು ಹಾಕಿದಂತೆ ಕಾಣಿಸುತ್ತಿದ್ದರೂ ಯಾವುದೇ ಕ್ಷಣದಲ್ಲೂ ಕಿತ್ತುಹೋಗಬಹುದು ಎಂದು ಹೇಳಬಹುದಾದಂಥ ಪರಿಸ್ಥಿತಿ ಇದೆ ಎನ್ನುತ್ತಾರೆ ಸಾರ್ವಜನಿಕರು. ಗಾಯಕ್ಕೆ ಪ್ಲಾಸ್ಟರ್ ಹಾಕಿದರೆ ಗಾಯ ಕಾಣಿಸುವುದಿಲ್ಲ. ಆದರೆ ಅದನ್ನು ಕಿತ್ತರೆ, ಗಾಯವೂ ಮತ್ತಷ್ಟು ಭೀಕರವಾಗಿ ಕಾಣಿಸುತ್ತದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಏನೋ ಫಳಫಳ ಹೊಳೆಯುತ್ತಿದೆ. ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಿಯ ಪಕ್ಕ ಒಂದು ಪಾರ್ಶ್ವ ಡಾಂಬರು ಕಾಣಿಸುತ್ತಿದೆ. ಮೇಲ್ಕಾರ್ ದಾಟಿದರೆ…. ಹೋಗಿಯೇ ನೋಡಬೇಕು!!

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.